Select Your Language

Notifications

webdunia
webdunia
webdunia
webdunia

ಡಿನೋಟಿಫಿಕೇಶನ್: ಬಿಜೆಪಿಯಿಂದ ಸಿಎಂ ಸಿದ್ರಾಮಯ್ಯ ವಿರುದ್ಧ ಎಸಿಬಿಗೆ ದೂರು

ಡಿನೋಟಿಫಿಕೇಶನ್: ಬಿಜೆಪಿಯಿಂದ ಸಿಎಂ ಸಿದ್ರಾಮಯ್ಯ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು , ಸೋಮವಾರ, 16 ಅಕ್ಟೋಬರ್ 2017 (17:01 IST)
ಭೂಪಸಂದ್ರದ ಸಮೀಪವಿರುವ ಭೂಮಿ ಡಿನೋಟಿಫೈ ವಿಚಾರ ಕುರಿತಂತೆ ಸಿಎಂ ಸಿದ್ರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯ ಬಿ.ಜಿ.ಪುಟ್ಟಸ್ವಾಮಿ, ಎಸಿಬಿಗೆ ದೂರು ದಾಖಲಿಸಿದ್ದು ಅವರೊಂದಿಗೆ ಶಾಸಕ ಮುನಿರಾಜು ಮತ್ತು ಎನ್‌.ಆರ್.ರಮೇಶ್ ಸಾಥ್ ನೀಡಿದ್ದಾರೆ.
 
ದೂರಿನಲ್ಲಿ ಸತ್ಯಾಂಶವಿಲ್ಲದಿದ್ರೆ ನಾನು ನೇಣಿಹಾಕಿಕೊಳ್ಳುತ್ತೇನೆ. ದೂರಿನಲ್ಲಿ ಸತ್ಯಾಂಶವಿದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ, ರಾಜ್ಯದ ಜನತೆಗೆ ಸತ್ಯ ಸಂಗತಿ ಗೊತ್ತಾಗಲಿ ಎಂದು ಸವಾಲ್ ಹಾಕಿದ್ದಾರೆ.
 
ಪುಟ್ಟಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳೆಂದು ಸಾಬೀತಾಗಿದೆ. ಈಗ ಏನು ಮಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ-ಆರೆಸ್ಸೆಸ್ ಸದಸ್ಯರನ್ನು ಕೆಣಕಿದ್ರೆ ಕಣ್ಣುಗಳನ್ನು ಕೀಳುತ್ತೇವೆ: ಬಿಜೆಪಿ ನಾಯಕಿ