Select Your Language

Notifications

webdunia
webdunia
webdunia
webdunia

ಬಿಎಸ್‌ವೈರಿಂದ ಗೋಮಾಳ್ ಬಾಂಬ್: ದಿನೇಶ್ ಗುಂಡೂರಾವ್ ಭೂಕಬಳಿಕೆ ಶೀಘ್ರ ಬಹಿರಂಗ

ಬಿಎಸ್‌ವೈರಿಂದ ಗೋಮಾಳ್ ಬಾಂಬ್: ದಿನೇಶ್ ಗುಂಡೂರಾವ್ ಭೂಕಬಳಿಕೆ ಶೀಘ್ರ ಬಹಿರಂಗ
ಬೆಂಗಳೂರು , ಗುರುವಾರ, 2 ಮಾರ್ಚ್ 2017 (20:24 IST)
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸರಕಾರಿ ಗೋಮಾಳಗಳನ್ನು ಕಬಳಿಸಿರುವ ಬಗ್ಗೆ 2-3 ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 
 
ದಿನೇಶ್ ಗುಂಡೂರಾವ್ ಕುಟುಂಬದ ಸದಸ್ಯರು ಸರಕಾರಿ ಗೋಮಾಳಗಳನ್ನು ಕಬಳಿಸಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಹಗರಣಗಳ ಬಗ್ಗೆ ಕೂಡಾ ಶೀಘ್ರದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಸ್ಟೀಲ್ ಬ್ರಿಡ್ಜ್ ಯೋಜನೆ ಸ್ಥಗಿತಗೊಳಿಸಿ ಆರೋಪಗಳಿಂದ ಮುಕ್ತರಾಗಬಹುದು ಎಂದು ಭಾವಿಸಿದ್ದಾರೆ. ಆದರೆ, ಡೈರಿ ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೆ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಬ್ಬರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾನೊಬ್ಬ ಬ್ಲಾಕ್ ಹಾರ್ಸ್ ಇದ್ದಂಗೆ : ಜಿ.ಪರಮೇಶ್ವರ್