Publish Date: Thu, 19 Jan 2023 (20:19 IST)
Updated Date: Thu, 19 Jan 2023 (20:22 IST)
ಸಾಮಾನ್ಯವಾಗಿ ನಾವು,ನೀವೆಲ್ಲಾ ಟೈಮ್ ನೋಡೋಕೆ ಗಡಿಯಾರ, ವಾಚ್ ಬಳಸುತ್ತೇವೆ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ನೀವೆಂದು ನೋಡಿರದ ವಾಚ್,ಗಡಿಯಾರಗಳ ಲೋಕ ಅನಾವರಣವಾಗಿದೆ. ಅಂದಿನಿಂದ ಇಂದಿನವರೆಗೆ ಕಾಲ ತೋರುವ ಗಡಿಯಾರದಲ್ಲಾದ ಬದಲಾವಣೆಗಳು ಜನರನ್ನ ಆಕರ್ಷಿಸುತ್ತಿದೆ. ಹೌದು ಬೆಂಗಳೂರು ಅರಮನೆಯ ಗಾಯತ್ರಿ ವಿಹಾರ್ ನಲ್ಲಿ 21ನೇ ಅಂತಾರಾಷ್ಟ್ರೀಯ ಗಡಿಯಾರ ಮೇಳ ನಡೆಯಿತು . ಸಮಯ ಭಾರತಿ ಸಂಸ್ಥೆ ಆಯೋಜಿಸಿರುವ 21ನೇ ವರ್ಷದ ಅಂತರಾಷ್ಟ್ರೀಯ ವಾಚ್ ಹಾಗೂ ಗಡಿಯಾರ ಸಂತೆಗೆ ಸಚಿವ ಅಶ್ವತ್ ನಾರಾಯಣ್ ಚಾಲನೆ ನೀಡಿದ್ರು.