ಬೇಡಿಕೆ ಈಡೇರಿಸುವಂತೆ ಬೀದಿಗಿಳಿದ ಡಯಾಲಿಸಿಸ್ ನೌಕರರು...!

Webdunia
ಗುರುವಾರ, 3 ಆಗಸ್ಟ್ 2023 (14:46 IST)
ಪ್ರತಿನಿತ್ಯ ನೂರಾರು ಮಂದಿಗೆ ಡೈಯಲಿಸಿಸ್ ಮಾಡಿ ಪ್ರಾಣಾ ಉಳಿಸುತ್ತಿದ್ದ ಡೈಯಾಲಿಸಿಸ್ ಸಿಬ್ಬಂದಿ ಇಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ..ರಾಜ್ಯದಾದ್ಯಂತ ಎಲ್ಲಾ ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇನ್ನು ಒಂದೆಡೆ ರೋಗಿಗಳಿಗೆ ಇದು ತೀರ ಆತಂಕ ಹೆಚ್ಚಿಸಿದೆ,ರೋಗಿಗಳಿಗೆ ಮಾತ್ರವಲ್ಲದೇ ಆರೋಗ್ಯ ಇಲಾಖೆ ಡಯಾಲಿಸಿಸ್ ನೌಕರರ ಪ್ರತಿಭಟನೆ ಬಿಸಿ ತಟ್ಟಿದ್ದು ಇಂದು ಆರೋಗ್ಯ ಸೌಧದಲ್ಲಿ ಸಭೆ ಕರೆದು ಮುಷ್ಕರ ವಾಪಸ್ ಪಡೆಯುವಂತೆ ಚರ್ಚೆ ನಡೆಸಲಾಯಿತು. ಮೊದಲ ಹಂತದ ಚರ್ಚೆಯಲ್ ಯಾವುದೇ ರೀತಿಯ ಸಂಧಾನಕ್ಕೆ ಒಪ್ಪದ ನೌಕರರು  ತಮ್ಮ ಬೇಡಿಕೆ ಈಡೇರುವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲಾ ಎಂದು ಪಟ್ಟು ಹಿಡಿದ್ರು.

ಇನ್ನೂ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಯಾವುದೇ ವೇತನ ನೀಡಿಲ್ಲ, ಹಾಗೇ ಸಂಜೀವಿನಿ ಸಂಸ್ಥೆಗೆ  ಟೆಂಡರ್ ನೀಡಿದ್ದು ಮೊದಲು ಬರುತ್ತಿದ್ದ ಸಂಬಳದಲ್ಲಿ 50 ಶೇಕಾಡದಷ್ಟು  ಕಡಿತಗೊಳಿಸಿ ಕೇವಲ 69೦೦ ರೂ ಸಂಬಳ ನೀಡುತಿರೋದು ನೌಕರರನ್ನು ಕೆರಳಿಸಿದೆ, ಬೇರೆ ಜೀವಗಳನ್ನು ಉಳಿಸಿದಾಗ ನಮ್ಮ ಕುಟುಂಬದವರು ಎಂದು ಬಾವಿಸೋ ನಮಗೆ ನಮ್ಮ ಕುಂಟುಂಬ ನಡೆಸಲು, ಜೀವನ ಸಾಗಿಸಲು ಸಾಧ್ಯವಾಗಿತ್ತಿಲ್ಲಾ ಎಂದು ಕಿಡಿ ಕಾರಿದ್ರು. ಹಿಂದೆ ಟೆಂಟರ್ ಪಡೆದ ಸಂಸ್ಥೆ ನೀಡುತ್ತಿದ್ದ  ಇಎಸ್ಐ, ಪಿಎಫ್ ಕೂಡ ಹೊಸ ಟೆಂಡರ್ ಪಡೆದ ಸಂಸ್ಥೆ ಮಣ್ಣು ಹಾಕಿದೆ.ಇದರಿಂದಾಗಿ  ಕೇವಲ ಕಂಪನಿ ಲಾಭ ಮಾಡಿಕೊಳ್ಳುತ್ತಿದ್ದು . ನೌಕರರ ಹೊಟ್ಟೆ ಮೇಲೆ ಹೊಟ್ಟೆಯ ಮೇಲೆ ಹೊಡೆದು ಮೋಸ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ರು. ಇನ್ನೂ ಆರೋಗ್ಯ ಇಲಾಖೆ ಡಯಾಲಿಸಿಸ್ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿದ್ದು ಆದರೆ ಸಿಬ್ಬಂದಿಗಳ ಯಾವುದೇ ಬೇಡಿಕೆಗಳು ಈಡೇರುವ ಲಕ್ಷಣಗಳು ಕಂಡು ಬರದೆ ಇರುವ ಹಿನ್ನೆಲೆ ಪ್ರತಿಭಟನೆ ಮುಂದಿನ ಹಂತವನ್ನು ತಲುಪುವ ರೀತಿ ಕಂಡು ಬರುತ್ತಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇವರೇನು ಬೇರೆ ಗ್ರಹದಿಂದ ಬಂದವರಲ್ಲ, ನಮ್ಮವರೇ: ಸಿಎಂ ಸಿದ್ದರಾಮಯ್ಯ

ಪೊಲೀಸರಿಗೆ ಹೊಸ ಟೋಪಿ ಹಾಕಿದ ಡಿಕೆ ಶಿವಕುಮಾರ್: ಇನ್ಮುಂದೆ ಈ ಸಮಸ್ಯೆಯೇ ಇಲ್ಲ ಎಂದರು

ಯುಟಿ ಖಾದರ್ ಅವಧಿಯಲ್ಲಿ ಭ್ರಷ್ಟಾಚಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ

ರೀಲ್ಸ್‌ ಮಾಡುವಾಗ ಯಮುನಾ ನದಿಗೆ ಜಾರಿ ಬಿದ್ದ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments