Publish Date: Wed, 12 Sep 2018 (17:08 IST)
Updated Date: Wed, 12 Sep 2018 (17:11 IST)
ದಟ್ಟವಾದ ಮುಂಜಾವಿನ ಮಂಜಿನಿಂದಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ- 4 ಪೂನಾ- ಬೆಂಗಳೂರ ಬಳಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಬೆಳಿಗ್ಗೆಯಿಂದ ದಟ್ಟವಾದ ಮಂಜು ಹರಡಿಕೊಂಡಿರುವದರಿಂದ ಲಾರಿ, ಬಸ್ಸು ಸೇರಿದಂತೆ ಇನ್ನಿತರ ವಾಹನ ಸವಾರರು ಸಾಕಷ್ಟು ಪರದಾಡಿದರು. ಇನ್ನು ಮಳೆಗಾಲದಲ್ಲೇ ಇಷ್ಟೊಂದು ಮಂಜು ಹರಡಿಕೊಂಡಿರುವದು ಇದೇ ಮೊದಲು ಎನ್ನಲಾಗುತ್ತಿದೆ.
ಮಳೆ ನೀರಿನ ತರಹ ಮಂಜು ಆವರಿಸಿಕೊಂಡಿರುವದರಿಂದ ವಾಹನ ಸವಾರರು ಲೈಟ್ ಹಚ್ಚಿಕೊಂಡೆ ವಾಹನ ಚಲಾಯಿಸುತ್ತಿರುವುದು ಕಂಡು ಬಂದಿದೆ. ಎರಡು ದಿನಗಳಿಂದ ಮಂಜು ಬೀಳುತ್ತಿರುವದರಿಂದ ಇನ್ನು ಮಳೆಯಾಗುತ್ತೊ ಇಲ್ಲೊ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.