ಪಂಚಭೂತಗಳಲ್ಲಿ ಲೀನವಾದ ವೀರ ಯೋಧ ಸಂತೋಷ

Webdunia
ಬುಧವಾರ, 11 ಜುಲೈ 2018 (15:34 IST)
ಆ  ಗ್ರಾಮದಲ್ಲಿ  ಇಡೀ ಊರಿಗೆ ಊರೇ, ಕಂಬನಿ ಮಿಡಿದಿತ್ತು. ಅಮರ ರಹೇ ಸಂತೋಷ  ಅಮರ ರಹೇ
ಅಂತಾ  ಘೋಷಣೆ ಎಲ್ಲಡೆ ಮುಳುಗಿತ್ತು. ಪಂಚ ಭೂತಗಳಲ್ಲಿ ಲೀನವಾದ ವೀರ ಯೋಧನಿಗೆ ಮತ್ತೆ ಹುಟ್ಟಿ ಬಾ ಅಂತಾ ಘೋಷಣೆ ಮುಗಿಲು ಮುಟ್ಟಿತ್ತು. ಇನ್ನು ವೀರ ಮರಣ ಹೊಂದಿದ  ಯೋಧ ಸಂತೋಷನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ  ಹಲಗಾ ಗ್ರಾಮದಲ್ಲಿ ಕಂಬನಿ ಮುಗಿಲು ಮುಟ್ಟಿತ್ತು.
ಛತ್ತಿಸಗಡದ ಕಾಂಕೆರ್ ಜಿಲ್ಲೆಯ ಬತ್ಸರ್ ಪ್ರದೇಶದಲ್ಲಿ ನಕ್ಸಲ್ ರಿಂದ  ಸುಧಾರಿತ ಬಾಂಬ ಸ್ಫೋಟದಲ್ಲಿ  ಕರ್ನಾಟಕದ ಇಬ್ಬರು ಯೋಧರು  ಹುತಾತ್ಮರಾಗಿದ್ದರು.  ಇದರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಯೋಧ ಸಂತೋಷ ಗುರವ್ (27)  ಹುತಾತ್ಮರಾಗಿದ್ದಾರೆ.  ಯೋಧನ ಪಾರ್ಥಿವ ಶರೀರವನ್ನು ಛತ್ತೀಸ್ಗಢ ದಿಂದ ವಿಶೇಷ ವಿಮಾನದ ಮೂಲಕ    ಸ್ವಗ್ರಾಮಕ್ಕೆ ಆಗಮಿಸಿತು. ಇನ್ನು ಯೋಧನ ಪಾರ್ಥಿವ ಶರಿರಕ್ಕೆ  ಗೌರವ ಸಲ್ಲಿಸಿ ಬರಮಾಡಿಕೊಂಡ ಖಾನಾಪೂರ ತಹಶಿಲ್ದಾರ ಸೇರಿದಂತೆ  ಸರ್ಕಾರದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು.
 ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಮರಾಠಾ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಮಳೆಯಲ್ಲೇ ಕೊಡೆ  ಹಿಡಿದು ಯೋಧ ಸಂತೋಷನ ಅಂತಿಮ ದರ್ಶನ ಪಡೆದರು. ಇನ್ನು ಯೋಧನ ಅಂತ್ಯ  ಸಂಸ್ಕಾರಕ್ಕ ಬೆಳಗಾವಿ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ,  ಸಿಇಓ ರಾಮಚಂದ್ರನ್, ಮಿಲಿಟರಿ ಅಧಿಕಾರಿಗಳು ಸೇರಿದಂತೆ  ಮಾಜಿ ಶಾಸಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ದರ್ಶನ  ಪಡೆದರು.

ಸ್ವಗ್ರಾಮವಾದ ಹಲಗಾದ ಮರಾಠಾ ಸಮುದಾಯದ ರುದ್ರಭೂಮಿಯಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ತಂದೆ ಲಕ್ಷ್ಮಣ ಗುರವ ಅವರಿಂದ ಅಗ್ನಿ ಸ್ಪರ್ಶ ಮಾಡಲಾಯಿತು. ಮರಾಠಾ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ಕುಟುಂಬಸ್ಥರು  ಅಂತ್ಯಕ್ರಿಯೆ ನೆರೆವೆರಿಸಿದರು. ಇನ್ನು  ಸಿ ಆರ್ ಪಿ ಎಫ್ ಯೋಧರು ಗಾಳಿಯಲ್ಲಿ ಅಶ್ರುತರ್ಪಣ ಹಾರಿಸಿ ಗೌರವ ಅರ್ಪಿಸಿದರು.  ವೀರ ಮರಣ ಹೊಂದಿದ ಸಂತೋಷ ಕುಟುಂಬಸ್ಥರ ಮನೆಯಲ್ಲಿ ಆಕ್ರಂದಣ ಮುಗಿಲು ಮುಟ್ಟಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments