Select Your Language

Notifications

webdunia
webdunia
webdunia
webdunia

‘ಆ ಕೆಲಸ ಮಾಡಿದ ಪೊಲೀಸರಿಗೆ ಧಿಕ್ಕಾರ ಧಿಕ್ಕಾರ’

‘ಆ ಕೆಲಸ ಮಾಡಿದ ಪೊಲೀಸರಿಗೆ ಧಿಕ್ಕಾರ ಧಿಕ್ಕಾರ’
ಧಾರವಾಡ , ಮಂಗಳವಾರ, 17 ಡಿಸೆಂಬರ್ 2019 (18:28 IST)
ದೆಹಲಿಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ವಿರೋಧಿಸಿ ಧಿಕ್ಕಾರ ಕೂಗಲಾಗಿದೆ.

ಎಐಡಿಎಸ್ಓ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಧಾರವಾಡ ನಗರದ ಕಡಪಾ ಮೈದಾನದಿಂದ ಹೊರಟ ಪ್ರತಿಭಟನಾ ರ್ಯಾಲಿಯು ವಿವೇಕಾನಂದ ವೃತ್ತವನ್ನು ಸುತ್ತು ಹಾಕಿ ಮತ್ತೆ ಕಡಪಾ ಮೈದಾನಕ್ಕೆ ತಲುಪಿತು. ದೇಶಾದ್ಯಂತ ವಿರೋಧಿಸಲ್ಪಡುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಅಲಿಘರ ಮುಸ್ಲಿಂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕೂಡಾ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಆ ವೇಳೆ ಕಿಡಿಗೇಡಿಗಳು ಮಾಡಿದ ಗಲಿಬಿಲಿಯಿಂದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದು ವಿದ್ಯಾರ್ಥಿಗಳ ಚಳುವಳಿಯಲ್ಲಿ ಕರಾಳ ದಿನವಾಗಿದೆ. ಅದಕ್ಕಾಗಿ ಈ ದಾಳಿಗೆ ಹೊಣೆಗಾರರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಐಡಿಎಸ್ಓ ಸಂಘಟಕರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.



Share this Story:

Follow Webdunia kannada

ಮುಂದಿನ ಸುದ್ದಿ

‘ಸಂವಿಧಾನಕ್ಕಿಂತ ನರೇಂದ್ರ ಮೋದಿ, ಅಮಿತ್ ಷಾ ದೊಡ್ಡವರಲ್ಲ’