Select Your Language

Notifications

webdunia
webdunia
webdunia
webdunia

ಅಮಲಿನಲ್ಲಿ ಗರ್ಭಿಣಿ ಸೇರಿ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ!

ಅಮಲಿನಲ್ಲಿ ಗರ್ಭಿಣಿ ಸೇರಿ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ!
ಮೈಸೂರು , ಶುಕ್ರವಾರ, 3 ಡಿಸೆಂಬರ್ 2021 (12:11 IST)
ಮೈಸೂರು : ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಓರ್ವ ಮಹಿಳೆ ಹತ್ಯೆಗೈದು, ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ.
ಈರಯ್ಯ ಅಲಿಯಾಸ್ ಕುಂಡ ಎಂಬುವವನು ಎದುರುಗಡೆ ಮನೆಯವನ ಮೇಲಿನ ಸಿಟ್ಟಿಗೆ ಆತನ  ತಾಯಿಯನ್ನು ಕೊಂದಿದ್ದಾನೆ. ಅಡ್ಡ ಬಂದ ಗರ್ಭಿಣಿ ಪತ್ನಿ ಹಾಗೂ ಅತ್ತೆ, ಮಾವ ಸೇರಿ ಒಟ್ಟು ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಎಂಬಲ್ಲಿ ನಡೆದಿದೆ.
ನವಿಲೂರಿನ ನಿಂಗಮ್ಮ(50) ಕೊಲೆಯಾದ ಮಹಿಳೆ. ಈರಯ್ಯ ತಡೆಯಲು ಹೋಗಿದ್ದ ಗರ್ಭಿಣಿ ಪತ್ನಿ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಹಲ್ಲೆಗೊಳಗಾದ ಅತ್ತೆ ಗೌರಮ್ಮ ಮತ್ತು ಮಾವ ಸುರೇಶ್ ಅಲಿಯಾಸ್ ಕೂಸು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಂತಕ ಈರಯ್ಯನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸೂರ್ಯಗ್ರಹಣ ; ಎಷ್ಟು ಗಂಟೆಗೆ ಗ್ರಹಣ?