ಮಧ್ಯರಾತ್ರಿ ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಹಿಟ್ ಅಂಡ್ ರನ್...!

Webdunia
ಸೋಮವಾರ, 19 ಜೂನ್ 2023 (18:33 IST)
ಹಿಟ್ ಅಂಡ್ ಪ್ರಕರಣ ಸದ್ಯ ಬೆಚ್ಚಿಬೀಳುವಂತೆ ಮಾಡಿದೆ. ಕಾಣ್ತಿರೊ ಯುವಕನ ಹೆಸರು ಪ್ರಸನ್ನ ಕುಮಾರ್..ಪ್ರಸನ್ನ ಕುಮಾರ್ ಹೆಚ್.ಡಿ.ಕೋಟೆ ಮೂಲದವ್ನು..ಬೆಂಗಳೂರಿನ ಹೋಟೆಲ್ ನಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದ..ತಡರಾತ್ರಿ ಹೆಚ್ಚುವರಿಯಾಗಿ ಫುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ.ಅದೇ ರೀತಿ ಮಧ್ಯರಾತ್ರಿ ನಾಯಂಡಹಳ್ಳಿ ಕಡೆಯಿಂದ ಆರ್ ಆರ್ ನಗರ ರಸ್ತೆ ಮಾರ್ಗವಾಗಿ ತೆರಳ್ತಿದ್ದ ಈ ವೇಳೆ ರಾತ್ರಿ 1.23 ಕ್ಕೆ ಅತೀ ವೇಗವಾಗಿ ಹಿಂಬದಿಯಿಂದ ಬಂದ ಕೆಎ 02 ಎಂಎಸ್ 4995 ನಂಬರ್ ನ ಕಿಯಾ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ..ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ೫೦ ಮೀಟರ್ ದೂರದ ವರೆಗೂ ಹಾರಿ ಬಿದ್ದಿದ್ದು ಸ್ಥಳದಲ್ಲೇ ಸಾವ ಪ್ರಸನ್ನ ಕುಮಾರ್ ಸಾವಿಗೆ ಕಾರಣ ಆದ ಕಾರು ಚಾಲಕ ಈತನೆ ನೋಡಿ ಹೆಸರು ವಿನಾಯಕ್..ವಿಜಯನಗರ ಮೂಲದ ವಿನಾಯಕ್ ರಾಜಾಜಿನಗರದಲ್ಲಿರುವ ಮಹೀಂದ್ರ ಕಾರ್ ಶೋ ರೂಂ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದ.ನಿನ್ನೆ ಇನ್ಸೆಂಟಿವ್ ಸಿಕ್ಕ ಖುಷಿಗೆ ಪಾರ್ಟಿ ಇಟ್ಟುಕೊಂಡಿದ್ದ ಯಶವಂತಪುರ ಬಳಿ ಪಾರ್ಟಿ ಮಾಡಿದ್ದ ವಿನಾಯಕ್ ಕುಡಿದು ಟೈಟಾಗಿದ್ದ.ಕುಡಿದ ಮತ್ತಲ್ಲಿಯೇ ತಡರಾತ್ರಿ ಸಾಗರ್ ಸೇರಿ ಮೂವರು ಯುವತಿಯರ ಜೊತೆಗೆ ಕಾರಿನಲ್ಲಿ‌ ಹೊರಟಿದ್ದ ಸಾಗರ್ ನನ್ನ  ಆರ್.ಆರ್. ನಗರ ಡ್ರಾಪ್ ಮಾಡಲು ನಾಯಂಡಹಳ್ಳಿ ಮಾರ್ಗವಾಗಿ ಆರ್.ಆರ್.ನಗರದ ಕಡೆಗೆ ಹೊರಟಿದ್ದ.ಈ ವೇಳೆ ಮೋಜು ಮಸ್ತಿ ಮಾಡ್ತಾ ಬಂದವರು ಪ್ರಸನ್ನ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.ಇಷ್ಟಾದರು ಕಾರು ನಿಲ್ಲಿಸದೇ ಪರಾರಿಯಾಗಿದ್ದ  ಸುಮಾರು ಒಂದು ಕಿಲೋ ಮೀಟರ್ ಸೂರ ಚೇಸ್ ಮಾಡಿ ಕಾರು ಅಡ್ಡಗಟ್ಟಿದ ಸ್ಥಳೀಯರು ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ.ಕಾರಲ್ಲಿದ್ದ ಯುವತಿಯರು ಎಸ್ಕೇಪ್ ಆದ್ರೆ ಚಾಲಕ ವಿನಾಯಕ್ ನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ .ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೆ ದಲಿತ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ: ನಿಮ್ಮಲ್ಲಿ ದಲಿತರನ್ನು ಸಿಎಂ ಮಾಡಿ ಎಂದ ಪಬ್ಲಿಕ್

Karnataka Weather: ಈ ಜಿಲ್ಲೆಯವರಿಗೆ ಇಂದು ಭಾರೀ ಮಳೆ

ಇದೇ 22ರಂದು ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಪಿಎಸ್ಐ ಆಗಿ 10ವರ್ಷ ಪೊರೈಸಿದ ಖುಷಿಯಲ್ಲಿ ಮಾಡ್ಬರ್ದು ಮಾಡಿ ಅಮಾನತು ಆದ ಪೋಲಿಸ್ ಅಧಿಕಾರಿ

ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ಮುಂದಿನ ಸುದ್ದಿ
Show comments