Webdunia - Bharat's app for daily news and videos

Install App

ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ಕುಸಮಲತಾಗೆ ಎಸಿಬಿ ಶಾಕ್

Webdunia
ಗುರುವಾರ, 26 ಆಗಸ್ಟ್ 2021 (19:04 IST)
ಬೆಂಗಳೂರು: ಡಿಡಿಎಲ್ಆರ್ (ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರು) ಕುಸುಮಲತಾ ರ ನಗರದಲ್ಲಿರುವ ಮನೆ ಕಚೇರಿಗಳ ಮೇಲೆ ಎಸಿಬಿ ಯಿಂದ ರೇಡ್ ಗುರುವಾರ ನೆಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಭೂ ಪರಿವರ್ತನೆ ಬಗೆಗೆ ದಾಖಲಾತಿ ಲಭ್ಯವಾದ ಹಿನ್ನಲೆಯಲ್ಲಿ ದಾಳಿ ನೆಡೆಸಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸಂತಪುರ ವಿಲೇಜ್ ನ ಸರ್ವೇ ನಂ.17
ರಲ್ಲಿರುವ 29 ಗುಂಟೆ ಖರಾಬು ಜಮೀನು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟಬೇಕಾದ ಆಸ್ತಿಯಾಗಿತ್ತು.
ಅಕ್ರಮಾಗಿ ಭೂ ಪರಿವರ್ತನೆ ಮಾಡಿದ ಜಮೀನು ಮಾಲಿಕರಾದ ವೇಣುಗೋಪಾಲ್ ಮತ್ತು ಮಧ್ಯವರ್ತಿ ಶಾಂತಕಮಾರ್ ಜೊತೆ ಶಾಮೀಲಾದ ಕುಸುಮಲತಾ ಹಳೆಯ ಹೈಕೋರ್ಟ್ ಆದೇಶದ ಹೆಸರಿನಲ್ಲಿ ಭೂ ಪರಿವರ್ತನೆಗೆ ಮುಂದಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಡಿಎಲ್ಆರ್ ಕುಸುಮಲತಾ ಮೇಲೆ ಸರ್ಕಾರಕ್ಕೆ ಬರಬೇಕಾಗಿದ್ದ ತೆರಿಗೆ ವಂಚನೆ ಆರೋಪ ಹೊರಿಸಲಾಗಿದೆ. ಅಕ್ರಮಾಗಿ ಭೂ ಪರಿವರ್ತನೆಯ ಸಂಬಂಧ ಲಕ್ಷಾಂತರ ರೂಪಾಯಿ ಲಂಚ ಪಡೆದು ಅಕ್ರಮ ಭೂ ಪರಿವರ್ತನೆ ಮಾಡಿರುವ ಕುರಿತು ಎಸಿಬಿ ದಾಳಿಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments