Webdunia - Bharat's app for daily news and videos

Install App

ಡಿಸಿಎಂ ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದಿದ್ದಾರೆ-ಸುರೇಶ್ ಗೌಡ ಆರೋಪ

Webdunia
ಮಂಗಳವಾರ, 2 ಏಪ್ರಿಲ್ 2019 (11:07 IST)
ತುಮಕೂರು : ವಿಧಾನಸಭಾ ಚುನಾವಣೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸ್ವಂತ ಬಲದಿಂದ ಗೆದ್ದಿಲ್ಲ. ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದರು ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.


ಕೊರಟಗೆರೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರದಲ್ಲಿ ತೊಡಗಿದ್ದ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪಗೆ 5 ಕೋಟಿ ರೂ ಕೊಟ್ಟು ಸುಧಾಕರ್ ಲಾಲ್‍ ರನ್ನ ಪರಮೇಶ್ವರ್ ಸೋಲಿಸಿದರು. ಆದ್ದರಿಂದ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಪರಮೇಶ್ವರ್ ಗೆಲುವಿಗೆ ಚೆನ್ನಿಗಪ್ಪ ಕಾರಣವಾದರು. ಬಳಿಕ ಅತ್ತ ಗ್ರಾಮಾಂತರ ಕ್ಷೇತ್ರದಲ್ಲೂ ಫಿಕ್ಸಿಂಗ್ ನಡೆದಿತ್ತು. ಜೆಡಿಎಸ್ ಅಭ್ಯರ್ಥಿ ಗೌರಿಶಂಕರ ಅವರನ್ನು ಗೆಲ್ಲಿಸಲು ಕಾಂಗ್ರೆಸ್ಸಿನಿಂದ ಡಮ್ಮಿ ಕಾಂಡಿಡೇಟ್ ಹಾಕಲಾಗಿತ್ತು. ಎಂದು ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.


ಈ ಫಿಕ್ಸಿಂಗ್ ವಿಚಾರ ದೇವೇಗೌಡರಿಗೂ ಗೊತ್ತು. ಅವರ ಪಕ್ಷದವರು ಹಣ ತೆಗೆದುಕೊಂಡಿರೋದು ಅವರಿಗೆ ಗೋತ್ತಿರಲ್ವಾ? ಸಿದ್ದರಾಮಯ್ಯ ಅವರಿಗೆ ಸಿಎಂ ಸೀಟು ತಪ್ಪಿಸಿ, ಜೆಡಿಎಸ್‍ ಗೆ ಸೀಟು ಕೊಡಿಸಲು ಈ ತಂತ್ರ ಮಾಡಿದ್ದಾರೆ. ಜೆಡಿಎಸ್ ಅವರನ್ನು ಕಾಂಗ್ರೆಸ್ ಜೊತೆ ಕಳುಹಿಸಿದ್ದಾಗ ದೇವೇಗೌಡ ಹಾಗೂ ಕುಮಾರಣ್ಣಗೆ ಗೊತ್ತಿರಲಿಲ್ವಾ? ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಸಿ ಜೆಡಿಎಸ್ ಅವರನ್ನ ಕಾಂಗ್ರೆಸ್‍ ಗೆ ಕಳುಹಿಸಿ ಸುಧಾಕರ್ ಲಾಲ್ ಅವರನ್ನು ಚೆನ್ನಿಗಪ್ಪ ಸೋಲಿಸಿದರು ಎಂದು ಅವರು ಆರೋಪ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ

ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್‌ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ

IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ಗೆ ಬಿತ್ತು ದಂಡ

ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments