Select Your Language

Notifications

webdunia
webdunia
webdunia
webdunia

ಕುಡಿಯಲು ನೀರು ಕೊಡಿ ಎಂದು CWRC ಆದೇಶ

Ramalinga Reddy
ಬೆಂಗಳೂರು: ದೆಹಲಿಯಲ್ಲಿ ನಡೆದ CWRC ಬೋರ್ಡ್ ಕುಡಿಯಲು ನೀರು  ಮೀಸಲು ಇಡಿ ಎಂದು ಆದೇಶ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು,  ಇವತ್ತು ದೆಹಲಿಯಲ್ಲಿ CWRC ಮೀಟಿಂಗ್ ನಡೆದಿದೆ. ಬೋರ್ಡ್ ಅವರು ಕುಡಿಯೋ ನೀರು ಕೊಡಿ ಅಂತ ಆದೇಶ ಮಾಡಿದ್ದಾರೆ. ಇನ್ನೂ ನೀರು ಬಿಡುಗಡೆಗೆ ತಮಿಳುನಾಡು ಡಿಮ್ಯಾಂಡ್ ಮಾಡಿದ್ದು, ನಮ್ಮ ರಾಜ್ಯದ ಅಡ್ವೈಸರ್‌ಗಳು ವಿಸಿ ಮೀಟಿಂಗ್ ನಲ್ಲಿ ನಮ್ಮ ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 

ತಕ್ಷಣ ತಮಿಳುನಾಡಿಗೆ ನೀರು ಬಿಡಲ್ಲ. ತಮಿಳುನಾಡಿಗೆ ನೀರು ಬಿಡಿ ಅಂತ ಆದೇಶ ಮಾಡಿಲ್ಲ. ಅದಕ್ಕೆ ನೀರು ಬಿಡಲ್ಲ. ನೀರು ಬಿಡುತ್ತಾರೆ ಅಂತ ಯಾರು ಬೇಕಾದರೂ ಆರೋಪ ಮಾಡಲಿ. ಆದರೆ ಎಷ್ಟು ನೀರು ಬಿಡಲಾಗಿದೆ ಅಂತ ಬಿಳುಗೊಂಡ್ಲುವಿನಲ್ಲಿ ಗೊತ್ತಾಗುತ್ತದೆ. ಈಗ ತಮಿಳುನಾಡಿಗೆ 3 ಟಿಎಂಸಿ ನೀರು ಮಾತ್ರ ಬಿಟ್ಟಿರೋದು. ಇನ್ನೂ ಹೆಚ್ಚಿನ ನೀಡು ಬಿಡಲು ನಮ್ಮ ಬಳಿ ನೀರಿಲ್ಲ ಎಂದರು.  

Share this Story:

Follow Webdunia kannada

ಮುಂದಿನ ಸುದ್ದಿ

ಗುರುಗ್ರಾಮದ ಕಿಂಗ್ಡಮ್ ಆಫ್ ಡ್ರೀಮ್ಸ್ ನಲ್ಲಿ ಭಾರಿ ಬೆಂಕಿ ಅವಘಡ