Select Your Language

Notifications

webdunia
webdunia
webdunia
webdunia

ನಿರಂತರ ಮಳೆ ರೈತರಿಗೆ ಶಾಪವಾಯ್ತ!

ನಿರಂತರ ಮಳೆ ರೈತರಿಗೆ ಶಾಪವಾಯ್ತ!
ಬೆಂಗಳೂರು , ಸೋಮವಾರ, 22 ನವೆಂಬರ್ 2021 (22:56 IST)
ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆ ರೈತರಿಗೆ ಶಾಪವಾಗಿ ಪರಿಣಮಿಸುತ್ತಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬಾಳೆ ತೋಟ ನಾಶವಾಗಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಜೆ.ಬಿ ಹಳ್ಳಿಯಲ್ಲಿ ಮೂರು ಎಕರೆ ಬಾಳೆ ತೋಟಕ್ಕೆ ಹಾನಿಯಾಗಿದ್ದು ರೈತ ಕಂಗಾಲಾಗಿದ್ದಾನೆ. ಸರ್ವರ್ವಲ್ಲಿ ಎಂಬ ರೈತನಿಗೆ ಸೇರಿದ ಬಾಳೆ ತೋಟ ಇದಾಗಿದ್ದು ಫಸಲು ಬಂದಿದ್ದ ಬಾಳೆ ಗಿಡ ಮಳೆ ಗಾಳಿ ಹೊಡೆತಕ್ಕೆ ನೆಲಕ್ಕೆ ಉರುಳಿದೆ. ವರುಣನ ಅರ್ಭಟಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯ ಅವಾಂತರ: ಸೇತುವೆ ಸಂಪೂರ್ಣ ಕುಸಿತ