Select Your Language

Notifications

webdunia
webdunia
webdunia
webdunia

ಬೊಗಳೇ ಬಿಡೋದೇ ಸಿ.ಎಸ್.ಪುಟ್ಟರಾಜು ಕೆಲಸ

ಬೊಗಳೇ ಬಿಡೋದೇ ಸಿ.ಎಸ್.ಪುಟ್ಟರಾಜು ಕೆಲಸ
ಮಂಡ್ಯ , ಗುರುವಾರ, 28 ನವೆಂಬರ್ 2019 (22:03 IST)
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಉಪ ಚುನಾವಣೆ ಅಖಾಡದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ.

ಮಂಡ್ಯದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ನಾವು ಹಣಕ್ಕೆ ಮಾರಾಟ ಮಾಡಿಕೊಂಡು ಬಿಜೆಪಿ ಪಕ್ಷ ಸೇರಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ದ್ರೋಹ, ವಿಶ್ವಾಸದ್ರೋಹ, ಡಬಲ್ ಗೇಮ್ ರಾಜಕಾರಣಿ ಯಾರಾದರೂ ಇದ್ದರೆ ಅದು ಪುಟ್ಟರಾಜು. ಹೀಗಂತ ಬಿಜೆಪಿ ಮುಖಂಡರಾದ ಎಸ್.ಅಂಬರೀಶ್, ಅಘಲಯ ಮಂಜುನಾಥ್, ಕಿಕ್ಕೇರಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ರು.

ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋತರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಬೊಗಳೆ ಬಿಟ್ಟಿದ್ದ ಪುಟ್ಟರಾಜು, ಮೊದಲು ತಮ್ಮ ಮಾತಿನಂತೆ ನಡೆದುಕೊಂಡು ನಂತರ ರೀಲ್ ಬಿಡಬೇಕು ಎಂದಿದ್ದಾರೆ. 

ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಸೋಲಿಸಲು ನೆರವಾಗಿ ವಿಶ್ವಾಸದ್ರೋಹ ಮಾಡಿದ್ದು ಇದೇ ಪುಟ್ಟರಾಜು. ನಡೆ ನುಡಿ ಒಂದಕ್ಕೊಂದು ಅರ್ಥವೇ ಇಲ್ಲ. ಮೋಸ ವಂಚನೆಗೆ ಇನ್ನೊಂದು ಹೆಸರೇ ಪುಟ್ಟರಾಜು ಎಂದು ಅಂಬರೀಶ್ ಲೇವಡಿ ಮಾಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

‘ಮಹಾ’ ಸಿಎಂ ಆಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕಾರ – ನರೇಂದ್ರ ಮೋದಿ ಹೇಳಿದ್ದೇನು?