Webdunia - Bharat's app for daily news and videos

Install App

ಹುಲಿಯನ್ನು ಎದುರಿಸಲು ಕಾಗೆ, ಮಂಗ, ನರಿಗಳು ಒಂದಾಗುತ್ತಿವೆ: ಅನಂತಕುಮಾರ್ ಹೆಗ್ಡೆ

Webdunia
ಶುಕ್ರವಾರ, 29 ಜೂನ್ 2018 (15:52 IST)
ಮುಂಬರುವ 2019ರ ಚುನಾವಣೆಯಲ್ಲಿ ಹುಲಿಯನ್ನು ಎದುರಿಸಲು ಕಾಗೆ, ಮಂಗ ಮತ್ತು ನರಿಗಳು ಒಂದಾಗುತ್ತಿವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕಾರವಾರದಲ್ಲಿ ಆಯೋಜಿಸಲಾದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಕಾಗೆ, ಮಂಗ ಮತ್ತು ನರಿಗಳು ಒಂದು ಕಡೆ ಸೇರಿದ್ದರೆ ಮತ್ತೊಂದು ಕಡೆ ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಹುಲಿಯನ್ನು ಗೆಲ್ಲಿಸಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ದೇಶದ ಅಭಿವೃದ್ಧಿ ಕುಂಠಿತವಾಗಲು ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಿದೆ. ಇಂದು ನಾವು ಪ್ಲ್ಯಾಸ್ಟಿಕ್ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ. ಒಂದು ವೇಳೆ ನಾವೇನಾದರೂ 70 ವರ್ಷ ಅಡಳಿತ ನಡೆಸಿದ್ದಲ್ಲಿ ನೀವೆಲ್ಲಾ ಬೆಳ್ಳಿಯ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೀರಿ ಎಂದು ಹೇಳಿದರು.
 
ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುವ ಹವ್ಯಾಸವಿರುವ ಸಂಸದ ಹೆಗಡೆ, ಕಳೆದ ವರ್ಷ ದಲಿತರನ್ನು ನಾಯಿಗಳಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. ನಾಯಿಗಳು ರಸ್ತೆಯ ಮೇಲೆ ಬೊಗಳುತ್ತಿದ್ದರೆ ನಾವು ಕೇರ್ ಮಾಡಲ್ಲ ಎಂದು ಗುಡುಗಿದ್ದರು. 
 
ಕರ್ನಾಟಕ ಚುನಾವಣೆಗೆ ಮುನ್ನ, ಹೆಗ್ಡೆ ಫೆಬ್ರವರಿಯಲ್ಲಿ ಹೇಳಿದರು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜನತೆ ಗೌರವಾನ್ವಿತ ಕನ್ನಡವನ್ನು ಮಾತನಾಡುತ್ತಾರೆ. ಇತರರು ಕನ್ನಡವನ್ನ ಮಾತನಾಡುತ್ತಿಲ್ಲ. ಸರಿಯಾದ ಕನ್ನಡವನ್ನು ಹೇಗೆ ಮಾತನಾಡಬೇಕು ಎಂದು ಬೆಂಗಳೂರು ಮತ್ತು ಮೈಸೂರು ಜನರಿಗೂ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಯೂಟ್ಯೂಬರ್‌ ಸಮೀರ್‌ಗೆ ಧರ್ಮಸ್ಥಳದ ಎಸ್‌ಐಟಿಯಿಂದ ಬಂತು ನೋಟಿಸ್‌

ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ: ವಿಜಯೇಂದ್ರ

ಕಿಂಗ್‌ ಕೋಬ್ರಾ ಪೋಟೋ ರಾಕೆಟ್‌: ಇಬ್ಬರ ವಿರುದ್ಧ ಎಫ್‌ಐಆರ್‌

ಧರ್ಮಸ್ಥಳದಲ್ಲಿ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ ಸುಜಾತಾ ಭಟ್‌ಗೆ ಎದುರಾಯಿತು ವಿಚಾರಣೆ

ಮುಂದಿನ ಸುದ್ದಿ
Show comments