Select Your Language

Notifications

webdunia
webdunia
webdunia
webdunia

ಇಂಥ ಸರಕಾರಿ ನೌಕರರ ಮೇಲೆ ಬೀಳುತ್ತೆ ಕ್ರಿಮಿನಲ್ ಕೇಸ್

ಇಂಥ ಸರಕಾರಿ ನೌಕರರ ಮೇಲೆ ಬೀಳುತ್ತೆ ಕ್ರಿಮಿನಲ್ ಕೇಸ್
ಕಲಬುರಗಿ , ಮಂಗಳವಾರ, 23 ಜೂನ್ 2020 (17:09 IST)
ಸರಕಾರಿ, ಸರಕಾರದ ನಿಗಮ, ಮಂಡಳಿ ಮತ್ತಿತರ ಅಧಿಕಾರಿ ಹಾಗೂ ಕೆಲವು ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ.

ಕಲಬುರಗಿ ತಾಲೂಕಿನ ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ ಮತ್ತಿತರ  ಅಧಿಕಾರಿ ಹಾಗೂ ನೌಕರರು ಬಿ.ಪಿ.ಎಲ್. ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ ಜೂನ್ 10 ರಿಂದ ಒಂದು ತಿಂಗಳೊಳಗಾಗಿ  ಕಲಬುರಗಿ ತಹಶೀಲ್ದಾರರ ಕಚೇರಿಯ ಆಹಾರ ಶಾಖೆಗೆ ಕೂಡಲೇ ಹಿಂದಿರುಗಿಸಬೇಕು.

ಹೀಗಂತ ಕಲಬುರಗಿ ತಹಶೀಲ್ದಾರ ಮಲ್ಲೇಶ ತಂಗಾ ತಿಳಿಸಿದ್ದು, ಒಂದು ತಿಂಗಳ ನಂತರವೂ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ ಸ್ವೀಕೃತವಾಗಿದ್ದಲ್ಲಿ ಅಂತಹ ನೌಕರರ ವಿರುದ್ದ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು  ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪೋಸ್ಟ್ ಆಫೀಸ್, ಪಾಸ್ ಪೋರ್ಟ್ ಕೇಂದ್ರಕ್ಕೆ ಬಂದ ಬಿಜೆಪಿ ಸಂಸದ