Webdunia - Bharat's app for daily news and videos

Install App

ಬಡತನದಲ್ಲಿ ಅರಳಿದ ಹೂ

Webdunia
ಸೋಮವಾರ, 14 ಫೆಬ್ರವರಿ 2022 (14:04 IST)
ಎಲೆಕ್ಟ್ರಿಷಿಯನ್​ ತಂದೆ ಪುತ್ರನ ಕ್ರಿಕೆಟ್​ ಭವಿಷ್ಯದ ಕನಸಿಗೆ ಸೂಕ್ತ ಮಾರ್ಗದರ್ಶನ ನೀಡಲು ಬೇಕಾಗಿದ್ದ ಖರ್ಚನ್ನು ಭರಿಸಲು ವಿಫಲನಾಗಿದ್ದರೂ ಸಹ ಈಗ ಅದೇ ಪುತ್ರ ಕ್ರಿಕೆಟ್​ ಜೀವನದಲ್ಲಿ ತನ್ನ ಅಂಬೆಗಾಲಿಡಲು ಸಜ್ಜಾಗುತ್ತಿದ್ದಾರೆ.
 
ಹೈದರಾಬಾದ್​ನ ಚಂದ್ರಾಯನಗುಟ್ಟಾ ಪ್ರದೇಶದಲ್ಲಿ ಅತ್ಯದ್ಭುತವಾಗಿ ಕ್ರಿಕೆಟ್​ ಆಡುತ್ತಿದ್ದ 9 ವರ್ಷದ ಪುಟ್ಟ ಪೋರ ಇದೀಗ ತನ್ನ 19ನೇ ವರ್ಷ ವಯಸ್ಸಿನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 1.7 ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದಾರೆ.
 
2022ನೇ ಸಾಲಿನ ಐಪಿಎಲ್​​ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡವು ಎನ್​ ತಿಲಕ್​ ವರ್ಮಾರನ್ನು 1.7 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಕ್ರಿಕೆಟಿಗನಾಗಿ ತಿಲಕ್​ ರೂಪುಗೊಳ್ಳುವದರ ಹಿಂದೆ ಕೋಚ್​ ಸಲಾಮ್ ಬಯಾಶ್​​ರ ಶ್ರಮ ಬಹಳಷ್ಟಿದೆ.
ತಿಲಕ್​ಗೆ ಅಗತ್ಯವಿದ್ದ ಮಾರ್ಗದರ್ಶನ, ಆಹಾರ ಹಾಗೂ ಎಷ್ಟೋ ಸಂದರ್ಭಗಳಲ್ಲಿ ತನ್ನ ಐದು ಮಂದಿ ಕುಟುಂಬಸ್ಥರು ವಾಸಿಸುತ್ತಿದ್ದ ಸ್ವಂತ ಮನೆಯಲ್ಲಿ ತಿಲಕ್​​ಗೆ ಆಶ್ರಯ ನೀಡಿದ್ದರಂತೆ.
 
ತಿಲಕ್​ ತಂದೆ ನಂಬೂರಿ ನಾಗರಾಜರಿಗೆ ಅವರನ್ನು ಕ್ರಿಕೆಟ್​ ಅಕಾಡೆಮಿಗೆ ಸೇರಿಸುವಷ್ಟು ಹಣ ಇರಲಿಲ್ಲ. ಈ ಸಂದರ್ಭದಲ್ಲಿ ಸಲಾಮ್,​​ ತಿಲಕ್​ಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ತಿಲಕ್​ ವರ್ಮಾ, ನನ್ನ ಬಗ್ಗೆ ನೀವು ಏನನ್ನೇ ಬರೆಯದಿದ್ದರೂ ಅಡ್ಡಿಲ್ಲ, ಆದರೆ ನನ್ನ ಕೋಚ್​ ಸರ್​ ಬಗ್ಗೆ ನೀವು ಅವಶ್ಯವಾಗಿ ಬರಯಲೇಬೇಕು ಎಂದು ಮಾಧ್ಯಮಗಳ ಎದುರು ಹೇಳಿದ್ದರಂತೆ.
 
ಕ್ರಿಕೆಟ್​ಗೆ ಬೇಕಾದ ಎಲ್ಲಾ ವೆಚ್ಚಗಳನ್ನು ಸಲಾಮ್​ ಭಾಯಿ ನೋಡಿಕೊಂಡಿದ್ದಾರೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಅಂದರೆ ಅದಕ್ಕೆ ಸಲಾಮ್​ ಹಾಗೂ ಅವರ ಕುಟುಂಬಸ್ಥರ ಬೆಂಬಲವೇ ಕಾರಣ ಎಂದು ತಿಲಕ್​ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments