Select Your Language

Notifications

webdunia
webdunia
webdunia
webdunia

ಭೃಷ್ಟಾಚಾರ ಆರೋಪ: ಎಸ್‌ಪಿ ಮಧುರವೀಣಾಗೆ ನೋಟಿಸ್

ಭೃಷ್ಟಾಚಾರ ಆರೋಪ: ಎಸ್‌ಪಿ ಮಧುರವೀಣಾಗೆ ನೋಟಿಸ್
ಬೆಂಗಳೂರು , ಶನಿವಾರ, 7 ಮೇ 2016 (12:31 IST)
ಭೃಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಐಡಿ ಎಸ್‌ಪಿ ಮಧುರವೀಣಾ ಮತ್ತು ಇತರ 12 ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. 

ಪ್ರಕರಣದ ಹೆಚ್ಚಿನ ತನಿಖೆ ನಡೆಸುವಂತೆ ಆಂತರಿಕ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಸ್ಪಷ್ಟ ಪಡಿಸಿದ್ದಾರೆ.
 
ಕಳೆದ ಮಾರ್ಚ್ ತಿಂಗಳಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶಿವಾಜಿನಗರದ ರಮಡ ಹೊಟೆಲ್‌ನ ರೂಮ್ ನಂಬರ್ 308ರ ಮೇಲೆ ದಾಳಿ ನಡೆಸಿದ್ದ ಮಧುರವೀಣಾ ಅವರ ತಂಡಕ್ಕೆಯಾವುದೇ ರೀತಿಯ ದಾಖಲೆಗಳು, ಸಾಕ್ಷ್ಯ ಸಿಕ್ಕಿರಲಿಲ್ಲ. ಅಲ್ಲಿ ಇಬ್ಬರು ಯುವತಿಯರಿದ್ದು ಅವರಿಬ್ಬರು ಆನ್ಲೈನ್ ಮೂಲಕ ರೂಮ್ ಬುಕ್ ಮಾಡಿದವರಾಗಿದ್ದರು.  ಆದರೆ ಕೇಸ್ ದಾಖಲಿಸುವ ಬೆದರಿಕೆ ಒಡ್ಡಿ ಎಸ್‌ಪಿ 2 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದರು. ಬಳಿಕವೂ ಮತ್ತೆ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದರು ಎಂದು ಹೊಟೆಲ್ ಮಾಲೀಕರು ಮಧುರವೀಣಾ ಮತ್ತು ಅವರ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬರದ ಬರೆ: ಇಂದು ಪ್ರಧಾನಿ- ಸಿಎಂ ಭೇಟಿ