Webdunia - Bharat's app for daily news and videos

Install App

ಕೆಲವು ನಾಯಿಗಳು ಬರ್ತಾವೇ ಬಿಸ್ಕಿಟ್ ಹಾಕಿ: ಭ್ರಷ್ಟ ಗುತ್ತಿಗೆದಾರನಿಗೆ ಭ್ರಷ್ಟ ತಹಶೀಲ್ದಾರ್‌ನ ಸಲಹೆ

Webdunia
ಮಂಗಳವಾರ, 31 ಮೇ 2016 (14:23 IST)
ಕೆಲವು ನಾಯಿಗಳು ಬರ್ತಾವೇ ಬಿಸ್ಕೆಟ್ ಹಾಕಿ ನೀರು ಕುಡಿಸಿ ಎಂದು ಗುತ್ತಿಗೆದಾರನೊಬ್ಬನಿಗೆ ತಹಶೀಲ್ದಾರರು ಸೂಚನೆ ನೀಡಿರುವ ಘಟನೆ ರಾಯಚೂರಿನ ಬರೋಲಿ ಗ್ರಾಮದಲ್ಲಿ ನಡೆದಿದೆ.
 
ದೇವಸ್ಥಾನದಲ್ಲಿ ತೆಂಗಿನ ಕಾಯಿ ಮಾರಾಟ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಹೆಚ್ಚಿನ ಹಣಕ್ಕೆ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು, ತಹಶೀಲ್ದಾರ್ ಎಸ್‌.ಟಿ.ಪುರೆ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡಿ, ಗುತ್ತಿಗೆದಾರನಿಗೆ ಬುದ್ದಿ ಹೇಳಿ ಎಂದು ಭಕ್ತರೊಬ್ಬರು ತಮ್ಮ ಮೊಬೈಲ್‌ನ್ನು ಗುತ್ತಿಗೆದಾರನ ಬಳಿ ನೀಡಿದ್ದಾರೆ.
 
ತಹಶೀಲ್ದಾರರು ಗುತ್ತಿಗೆದಾರನ ಜೊತೆ ಪೋನಿನಲ್ಲಿ ಮಾತನಾಡಿ ಡೈರೆಕ್ಟ್ ಆಗಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬೇಡ, ಕೆಲವು ನಾಯಿಗಳು ಬರ್ತಾವೆ, ಬಿಸ್ಕಿಟ್ ಹಾಕಿ ನೀರು ಕುಡಿಸಿ ಎಂದು ಗುತ್ತಿಗೆದಾರನ ಪರವಹಿಸಿ ಮಾತನಾಡಿ ಅನಾಗರಿಕತೆಯನ್ನು ಮೆರೆದಿದ್ದಾರೆ. 
 
ತಹಶೀಲ್ದಾರ ಮತ್ತು ಗುತ್ತಿಗೆದಾರನ ಸಂಭಾಷಣೆ ಭಕ್ತರ ಮೊಬೈಲ್ ಪೋನ್‌ನಲ್ಲಿ ರೆಕಾರ್ಡ್ ಆಗಿದೆ. ಈ ಸಂಭಾಷಣೆಯ ವಿವರಗಳನ್ನು ತೆಗೆದುಕೊಂಡು ಭಕ್ತಾಧಿಗಳು ರಾಯಚೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments