Webdunia - Bharat's app for daily news and videos

Install App

ಕೊರೊನಾ ಎಫೆಕ್ಟ್ : ಮನೆ ಬಾಗಿಲಿಗೇ ಬಂತು ದಿನಸಿ

Webdunia
ಭಾನುವಾರ, 29 ಮಾರ್ಚ್ 2020 (17:32 IST)
ಕೋವಿಡ್-19 ಹರಡದಂತೆ 21 ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿರೋದ್ರಿಂದ ಜನರ ಮನೆ ಬಾಗಿಲಿಗೇ ಇದೀಗ ಕಿರಾಣಿ ವಸ್ತುಗಳು ಬರುತ್ತಿವೆ.

ರಾಮನಗರದ ಚನ್ನಪಟ್ಟಣ ತಾಲ್ಲೂಕಿನ  ಚಕ್ಕರೆ ಗ್ರಾಮ ಪಂಚಾಯಿತಿಯಿಂದ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಗ್ರಾಮದಲ್ಲಿ ಪಡಿತರ ಅಂಗಡಿಗಳಿಂದ ನೀಡಲಾಗುವ ಅಕ್ಕಿ ಮತ್ತು ರಾಗಿಯನ್ನು ನೀಡಲಾಗುತ್ತದೆ. ಮಿತವ್ಯಯವಾಗಿ ಸಾಮಾನ್ಯವಾಗಿ ಅಡುಗೆ ಮಾಡಿಕೊಂಡು ಜೀವನ ನಡೆಸಲು ಬೇಕಿರುವ ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ.  ಗ್ರಾಮದಲ್ಲಿ ಮೊದಲ ಆದ್ಯತೆಯ ಮೇಲೆ 100 ಬಡ ಕುಟುಂಬಗಳಿಗೆ ನೀಡಲು ಯೋಜಿಸಲಾಗಿದೆ.

1 ಕೆ.ಜಿ. ಬೇಳೆ, 1 ಕೆ.ಜಿ. ಎಣ್ಣೆ, 2 ಕೆ.ಜಿ. ರವೆ, ಉಪ್ಪು, ಟೀ ಪುಡಿ, ಸಕ್ಕರೆ, ಉರುಳಿ ಕಾಳು , ಅವರೇ ಕಾಳು, ಸಾಂಬರ್ ಪುಡಿ, ಈರುಳ್ಳಿಯನ್ನು  ಪ್ಯಾಕೆಟ್ ಮಾಡಲಾಗಿದೆ. ಮೊದಲ ಆದ್ಯತೆ ಮೇರೆಗೆ 100 ಕುಟುಂಬಗಳಿಗೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಮನೆಗೆ ತಲುಪಿಸಲಾಗುತ್ತಿದೆ.

ಗ್ರಾಮದಲ್ಲಿ ಒಂದು ವರ್ಷದ ಹಿಂದೆಯೇ ಕಟ್ಟಡ ಕಾರ್ಮಿಕರು ಹಾಗೂ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುವ 10 ಕುಟುಂಬಗಳಿದ್ದು, ಅವರಿಗೆ ಸದರಿ ಆಹಾರ ಸಾಮಗ್ರಿಗಳ ಜೊತೆಗೆ ಪಡಿತರ ಚೀಟಿ ಇಲ್ಲದಿರುವುದರಿಂದ ಅಕ್ಕಿ ಸಹ ನೀಡಲಾಗುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಳ್ಳಾರಿ ಪಾದಯಾತ್ರೆ ಬಗ್ಗೆ ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ

ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ, ಆದರೆ ತಪ್ಪು ಹರಡಲಾಗುತ್ತಿದೆ, ನನಗೆ ಹಜ್ ಗೆ ಹೋಗಬೇಕೆಂದಿದೆ: ಬಸವರಾಜ ರಾಯರೆಡ್ಡಿ

ಆನ್‌ಲೈನ್‌ನಲ್ಲಿ ಮಗಳ ಮದುವೆ ನೋಡಿ ಕಣ್ಣೀರಿಟ್ಟ ಹೆತ್ತವರು: Video

ಕರ್ನಾಟಕ ಉದ್ಯಾನವನ ತಿದ್ದುಪಡಿ ಕಾಯ್ದೆ ವಿರುದ್ಧ ಲಾಲ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ

ನಂಜೊತೆ ಬನ್ನಿ ಎಂದು ಮಹಿಳೆಯನ್ನು ಕರೆದೊಯ್ದ ಬೀದಿ ನಾಯಿ: ಕೊನೆಗೆ ತೋರಿಸಿದ್ದು ಏನು, ನಿಜಕ್ಕೂ ಅಚ್ಚರಿ Video

ಮುಂದಿನ ಸುದ್ದಿ
Show comments