Webdunia - Bharat's app for daily news and videos

Install App

ಹಿಂದೂಗಳು ಬುರ್ಖಾ ಧರಿಸಲಿ ಎಂದಿಲ್ಲ: ರಾಯರೆಡ್ಡಿ

Webdunia
ಬುಧವಾರ, 2 ನವೆಂಬರ್ 2016 (09:30 IST)
ಹಿಂದೂಗಳು ಬುರ್ಖಾ ಧರಿಸಲಿ ಎಂದು ನಾನು ಹೇಳಿಲ್ಲ. ಯಾರು ಬೇಕಾದರೂ ಧರಿಸಬಹುದು ಎಂದು ಹೇಳಿದ್ದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಯು-ಟರ್ನ್ ತೆಗೆದುಕೊಳ್ಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. 
ಕೊಪ್ಪಳದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು ಕೆಲವರು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ಬೂರ್ಕಾ ಕೇವಲ ಮುಸ್ಲಿಂರ ಉಡುಪಲ್ಲ. ಅದನ್ನು ಯಾರೂ ಬೇಕಾದರೂ ಧರಿಸಬಹುದು ಎಂದು ಮತ್ತೊಮ್ಮೆ ಪುನರುಚ್ಚಿಸುವ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಸೋಮವಾರ ಬೂರ್ಕಾ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದರು. 
 
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹಿಂದೆ ಹೇಳಿಕೆ ನೀಡಿದಂತೆ ಬೂರ್ಕಾ ಧಿರಿಸನ್ನು ಯಾರೂ ಬೇಕಾದರೂ ಧರಿಸಬಹುದು. ಅದನ್ನು ಮುಸ್ಲಿಂರು ಮಾತ್ರ ಧರಿಸುತ್ತಾರೆ ಎಂದು ಒಂದೇ ಸಮುದಾಯಕ್ಕೆ ಅದನ್ನು ಯಾಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದ್ದರು.
 
ಕಾಲೇಜ್ ಗೆ ಬೂರ್ಕಾ ಜೊತೆ ಕೇಸರಿ ಶಾಲು ಬೇಕಾದರೂ ಹಾಕಿಕೊಂಡು ಬರಬಹುದು. ಉಡುಪು ಅವರವರ ಆಯ್ಕೆ. ಆದರೆ, ಕಾಲೇಜು ವೇಳೆಯಲ್ಲಿ ಡೀಸೆಂಟ್ ಬಟ್ಟೆಯನ್ನಷ್ಟೇ ತೊಡಬೇಕು ಎನ್ನುವುದು ನಮ್ಮ ಆಶಯ. ಆದರೆ, ಇಂತಹದ್ದೇ ಬಟ್ಟೆ ತೊಡಬೇಕು ಎಂದು ಹೇಳಲು ನಾನ್ಯಾರು? ಎಂದ ರಾಯರೆಡ್ಡಿ, ಕೆಲವು ಮತೀಯವಾದಿಗಳು ಮಾಧ್ಯಮಗಳಲ್ಲಿ ಅದನ್ನು ವೈಭವೀಕರಿಸುತ್ತಿದ್ದಾರೆ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

ಉಗ್ರರಿಗೆ ನೆರವಾಗುತ್ತಿದ್ದ ಎಎಸ್ಐ ಚಾಂದ್ ಪಾಷಾನನ್ನು ಅರೆಸ್ಟ್ ಮಾಡಿದ ಎನ್ಐಎ

Gold price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಹೃದಯಾಘಾತ ಇಫೆಕ್ಟ್: ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ದಂಡು

ನಮ್ಮ ಜಿಹಾದಿಗಳ ಮುಂದೆ ಎದುರಾಳಿಯ ಕ್ಷಿಪಣಿಗಳು ಲೆಕ್ಕಕ್ಕೇ ಇಲ್ಲ: ಉಗ್ರ ಮಸೂದ್ ಅಜರ್

ಮುಂದಿನ ಸುದ್ದಿ
Show comments