Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಹಣ, ಅಧಿಕಾರ, ತೋಳ್ಬಲದಿಂದ ಚುನಾವಣೆ ಗೆದ್ದಿದೆ: ಬಿಎಸ್‌ವೈ

ಕಾಂಗ್ರೆಸ್ ಹಣ, ಅಧಿಕಾರ, ತೋಳ್ಬಲದಿಂದ ಚುನಾವಣೆ ಗೆದ್ದಿದೆ: ಬಿಎಸ್‌ವೈ
ಗುಂಡ್ಲುಪೇಟೆ , ಸೋಮವಾರ, 17 ಏಪ್ರಿಲ್ 2017 (15:26 IST)
ಕಾಂಗ್ರೆಸ್ ಹಣ, ಅಧಿಕಾರ ತೋಳ್ಬಲದಿಂದ ಚುನಾವಣೆ ಗೆದ್ದಿದೆ. ಹೆಚ್ಚಿನ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.  
 
ಗುಂಡ್ಲುಪೇಟೆಯಲ್ಲಿ ಆಯೋಜಿಸಲಾದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿನ ಜನರಿಗಿರುವ ಉತ್ಸಾಹವನ್ನು ಶಿಕಾರಿಪುರದಲ್ಲಿ ನೋಡಿರಲಿಲ್ಲ. ಕಾಂಗ್ರೆಸ್‌ನವರು ಹಣ ಚೆಲ್ಲಿ ಜಯಗಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿವೆ. ಆದಾಗ್ಯೂ ಕ್ಷೇತ್ರದ ಶೇ.46 ರಷ್ಟು ಜನತೆ ನಮ್ಮೊಂದಿಗಿದ್ದಾರೆ. ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಕರೆಂಟ್ ತೆಗೆದು ಹಣ ಹಂಚಲಾಗಿತ್ತು ಎಂದು ಆರೋಪಿಸಿದರು.
 
ಹಣ ಹಂಚುತ್ತಿದ್ದಾಗ ಕೆಎಸ್‌ಆರ್‌ಟಿಸಿ ಅಧಿಕಾರಿ ಸಿಕ್ಕುಬಿದ್ದಿದ್ದರು. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಸಿದ್ದರಾಮಯ್ಯ ಸರಕಾರ ಅಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಚುನಾವಣೆ ಗೆದ್ದಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗಿದು ಗೊತ್ತೇ..? ಬೆಂಗಳೂರು ಸಮೀಪವೂ ಇವೆ ಉರಿಯುತ್ತಿರುವ ಅಗ್ನಿಕುಂಡಗಳಿವೆ..1