Select Your Language

Notifications

webdunia
webdunia
webdunia
webdunia

ಮುಸ್ಲಿಂ ಮುಖಂಡರು ಬೆಳೆಯಲು ಕಾಂಗ್ರೆಸ್‌ ಬಿಡುವುದಿಲ್ಲ

ಜನಾರ್ಧನ ರೆಡ್ಡಿ

geetha

ಗಂಗಾವತಿ , ಭಾನುವಾರ, 25 ಫೆಬ್ರವರಿ 2024 (18:33 IST)
ಗಂಗಾವತಿ : ಮುಸ್ಲಿಂ ಮುಖಂಡರು ಬೆಳೆಯಬಾರದು ಎಂಬುದು ಕಾಂಗ್ರೆಸ್‌ ಇಚ್ಛೆಯಾಗಿದೆ. ಹೀಗಾಗಿ ನನ್ನನ್ನು ನನ್ನ ಪಕ್ಷದ ಮುಖಂಡರೇ ಪಿತೂರಿ ನಡೆಸಿ ಸೋಲಿಸಿದ್ದಾರೆಂದು ಆರೋಪಿಸಿರುವ ಇಕ್ಬಾಲ್‌ ಅನ್ಸಾರಿ, ಕಾಂಗ್ರೆಸ್‌ ಮುಖಂಡರೇ ಮುಂದೆ ನಿಂತು ಜನಾರ್ಧನ ರೆಡ್ಡಿ ಪರವಾಗಿ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು ಎಂದು ದೂರಿದ್ದಾರೆ. ಕಾಂಗ್ರೆಸ್‌ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಪಕ್ಷದ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪಕ್ಷದ ಹಿರಿಯ ಮುಖಂಡರ ವಿರುದ್ದ ದನಿಯೆತ್ತಿದ್ದ ಇಕ್ಬಾಲ್‌ ಅನ್ಸಾರಿ, ನನ್ನ ಸೋಲಿಗೆ ಕಾಂಗ್ರೆಸ್‌ ಮುಖಂಡರೇ ಕಾರಣ ಎಂದು ದೂರಿದ್ದಾರೆ.

ಈ ವಿಷಯವನ್ನು ನನ್ನ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಮನೆಗೂ ಹೋಗಿ ತಿಳಿಸುತ್ತೇನೆ ಎಂದು ಕಾಂಗ್ರೆಸ್‌ ವಿರುದ್ದ ಕಿಡಿ ಕಾರಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ತಿರುವು ಕಾಣಲಿದೆ ಎಂದು ಸೂಚ್ಯವಾಗಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ತಿಳಿಸಿರುವ ಇಕ್ಬಾಲ್‌ ಅನ್ಸಾರಿ, ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದಾರೆ. ಈ ಹಿಂದೆ ಹಲವು ಬಾರಿ ಯಾವ ಕಾರಣಕ್ಕೂ ನಾನು ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಇಕ್ಬಾಲ್‌ ಅನ್ಸಾರಿ ಹೇಳಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್‌ ಕೊಡ್ತೀವಿ ಅಂತ ಕರೆಸಿ ಕಿಡ್ನಾಪ್‌ ಮಾಡಿದ ಖದೀಮರು