Select Your Language

Notifications

webdunia
webdunia
webdunia
webdunia

ಮೈಸೂರು 'ಕೈ' ಸಮಾವೇಶದಲ್ಲಿ ಉಚ್ಚಾಟಿತ 'ಮರಿ' ಗೌಡ

ಮೈಸೂರು 'ಕೈ' ಸಮಾವೇಶದಲ್ಲಿ ಉಚ್ಚಾಟಿತ 'ಮರಿ' ಗೌಡ
ಮೈಸೂರು , ಭಾನುವಾರ, 23 ಅಕ್ಟೋಬರ್ 2016 (13:33 IST)
ನಂಜನಗೂಡಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತ ಕೆ.ಮರಿಗೌಡ ವೇದಿಕೆಯ ಮೇಲೆ ಕಾಣಿಸಿಕೊಂಡು ಗಲಿಬಿಲಿ ಮೂಡಿಸಿದ್ದಾರೆ.
 
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರೊಂದಿಗೆ ಅಸಭ್ಯ ವರ್ತನೆ ತೋರಿ ಒಂದು ತಿಂಗಳುಗಳ ಜೈಲುವಾಸ ಅನುಭವಿಸಿದ್ದ ಮರಿಗೌಡನನ್ನು ಕೆಪಿಸಿಸಿ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿತ್ತು.
 
ಸಿಎಂ ಸಿದ್ದರಾಮಯ್ಯನವರ ಆಪ್ತ ಎಂದು ಬಿಂಬಿತರಾದ ಮರಿಗೌಡ ವೇದಿಕೆಯ ಎರಡನೇ ಸಾಲಿನಲ್ಲಿ ಕುಳಿತಿರುವುದು ಕಾಂಗ್ರೆಸ್ ಪಕ್ಷದ ಕೆಲ ನಾಯಕರಲ್ಲಿ ಅಸಮಾಧಾನ ಮೂಡಿಸಿತು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿಕೆ ನೀಡಿ ಮರಿಗೌಡನನ್ನು ದೂರವಿಟ್ಟಿದ್ದರು. ದೂರು ದಾಖಲಾಗುತ್ತಿದ್ದಂತೆ ಕಾಣೆಯಾಗಿದ್ದ ಮರಿಗೌಡ, ನಂತರ ನ್ಯಾಯಾಲಯದ ಮುಂದೆ ಶರಣಾಗಿ ಜೈಲುವಾಸ ಅನುಭವಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದ 8-10 ಹಿರಿಯ ಶಾಸಕರು ಬಿಜೆಪಿಗೆ ಸೇರ್ಪಡೆ: ಯಡಿಯೂರಪ್ಪ