Webdunia - Bharat's app for daily news and videos

Install App

ಸುರ್ಜೇವಾಲ ಮೀಟಿಂಗ್ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನ

Krishnaveni K
ಗುರುವಾರ, 17 ಜುಲೈ 2025 (10:19 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಶಾಸಕರು, ಸಚಿವರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ನಡೆಸುತ್ತಿರುವ ಮೀಟಿಂಗ್ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನ ಕೇಳಿಬಂದಿದೆ.

ನಿನ್ನೆಯವರೆಗೆ ಮೂರು ದಿನಗಳ ಕಾಲ ಸಚಿವರ ಜೊತೆ ರಣದೀಪ್ ಸಿಂಗ್ ಸಭೆ ನಡೆಸಿದ್ದರು. ಇದಕ್ಕೆ ಮೊದಲು ಶಾಸಕರ ಸಭೆ ನಡೆಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದ್ದರು. ಆದರೆ ಈ ಸಭೆ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನವಿದೆ.

ರಣದೀಪ್ ಸುರ್ಜೇವಾಲ ಇಲ್ಲಿ ಹಲವು ದಿನ ಇದ್ದು ಮ್ಯಾರಥಾನ್ ಮೀಟಿಂಗ್ ನಡೆಸುತ್ತಿರುವುದರ ಬಗ್ಗೆ ಕೆಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲ ಆಂಧ್ರದಲ್ಲಿ ಕೇವಲ ಒಂದು ದಿನ ಸಭೆ ನಡೆಸಿ ಹೋಗಿದ್ದಾರೆ. ಇಲ್ಲಿ ಹಲವು ದಿನಗಳಿಂದ ಮೀಟಿಂಗ್ ನಡೆಸುವ ಅಗತ್ಯವಿರಲಿಲ್ಲ ಎಂದಿದ್ದಾರೆ.

ಇನ್ನು ಎಂಎಲ್ ಸಿ ರಾಜೇಂದ್ರ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಸ್ಯೆಗಳೇನಾದರೂ ಇದ್ದರೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕೇಳುವುದು ಪದ್ಧತಿ. ಆದರೆ ಈಗ ರಣದೀಪ್ ಸಭೆ ನಡೆಸಿದ್ದಾರೆ. ಅನುದಾನವನ್ನೂ ಅವರೇ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

40 ವರ್ಷ ಮೇಲ್ಪಟ್ಟವರು ಹೃದಯಾಘಾತವಾಗದಂತೆ ಈ ಟಿಪ್ಸ್ ಪಾಲಿಸಿ: ಡಾ ದೇವಿಪ್ರಸಾದ್ ಶೆಟ್ಟಿ

ಸುರ್ಜೇವಾಲ ಮೀಟಿಂಗ್ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನ

ಸಚಿವರ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸುರ್ಜೇವಾಲ ಮೀಟಿಂಗ್

ಶಾಸಕ ವಿ ಸುನಿಲ್ ಕುಮಾರ್ ಗೆ ಪಿತೃ ವಿಯೋಗ

Karnataka Weather: ಎರಡು ದಿನ ಭಾರೀ ಮಳೆ, ಕರಾವಳಿಗೆ ಇಂದೂ ಮಳೆಯಿರುತ್ತಾ ನೋಡಿ

ಮುಂದಿನ ಸುದ್ದಿ
Show comments