Select Your Language

Notifications

webdunia
webdunia
webdunia
webdunia

ನಟ ಉಪೇಂದ್ರ ವಿರುದ್ಧ ದೂರು ದಾಖಲು

ನಟ ಉಪೇಂದ್ರ ವಿರುದ್ಧ ದೂರು ದಾಖಲು
ಬೆಂಗಳೂರು , ಶುಕ್ರವಾರ, 3 ನವೆಂಬರ್ 2017 (09:17 IST)
ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿದ್ದ ನಟ ಉಪೇಂದ್ರ ವಿರುದ್ಧ ಶೇಷಾದ್ರಿ ಪುರಂ ಪೊಲೀಸ್ ಠಾಣೆ ಮತ್ತು ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.

 
ಕೆಪಿಜೆಪಿ ಪಕ್ಷದ ಗೌರವಾಧ್ಯಕ್ಷರಾಗಿರುವ ಉಪೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಹೇಳಿದ ಮಾತೊಂದು ಇದೀಗ ಅವರಿಗೇ ಮುಳುವಾಗಿದೆ. ‘ಬೇರೆ ಪಕ್ಷದವರು ಹಣ ನೀಡಿದರೆ ಸ್ವೀಕರಿಸಿ, ಅದು ನಿಮ್ಮದೇ ಹಣ’ ಎಂದು ಉಪೇಂದ್ರ ಹೇಳಿದ್ದರು.

ಈ ಹೇಳಿಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡಲಿದೆ. ಈ ಹಿನ್ನಲೆಯಲ್ಲಿ ಉಪೇಂದ್ರ ಸಾರ್ವಜನಿಕವಾಗಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಜೆಡಿಯು ಪಕ್ಷ ದೂರು ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾದಿದೆ ನಿಮಗೆ ಗ್ರಹಚಾರ! ಬಿಜೆಪಿ ನಾಯಕರಿಗೆ ಬೆಂಡೆತ್ತಿದ ಅಮಿತ್ ಶಾ!