Select Your Language

Notifications

webdunia
webdunia
webdunia
webdunia

ಅವಹೇಳನಕಾರಿ ಪೋಸ್ಟ್​​​​ ವಿರುದ್ಧ ದೂರು

ಅವಹೇಳನಕಾರಿ ಪೋಸ್ಟ್​​​​ ವಿರುದ್ಧ ದೂರು
bangalore , ಸೋಮವಾರ, 18 ಜುಲೈ 2022 (19:12 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. ಈ ಸಂಬಂಧ ಪೋಸ್ಟ್ ಹಾಕಿದವನ ವಿರುದ್ದ ಮೈಸೂರು​​​​ ಯೂತ್​ ಕಾಂಗ್ರೆಸ್​​​ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಗೋವಿಂದ ನಾಯಕ ಎಂಬುವವರ ವಿರುದ್ದ ದೂರು ದಾಖಲಿಸಲಾಗಿದ್ದು, ಗೋವಿಂದ್ ಹುಣಸೂರಿನ ಕಲ್ಕುಣಿಕೆಯ ನಿವಾಸಿಯಾಗಿದ್ದಾನೆ. ಈತ ಇದೇ ನನ್ನ ಕೊನೆ ಚುನಾವಣೆ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿದ್ದ ಈ ಬಗ್ಗೆ ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. ನೀನು ಎಲ್ಲೇ ನಿಂತರೂ ಸೋಲು. ನಿನ್ನಂತಹ ದುರಂಹಕಾರಿ ದೇಶದಲ್ಲಿ ಯಾರು ಇಲ್ಲ ಸಿದ್ರಾಮುಲ್ಲಾ..  ಅಂತಾ ಕಾಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಕಾಮೆಂಟ್ ಉಲ್ಲೇಖಿಸಿ ದೂರು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ