Select Your Language

Notifications

webdunia
webdunia
webdunia
webdunia

ಅಕ್ರಮ ಮಾಡುವ ನಿಮಗೆ ಮಾನ ಮರ್ಯಾದೆ ಇದೆಯೇ?: ಬಿಜೆಪಿಗೆ ಸಿಎಂ ತಿರುಗೇಟು

ಅಕ್ರಮ ಮಾಡುವ ನಿಮಗೆ ಮಾನ ಮರ್ಯಾದೆ ಇದೆಯೇ?: ಬಿಜೆಪಿಗೆ ಸಿಎಂ ತಿರುಗೇಟು
ಬೆಂಗಳೂರು , ಗುರುವಾರ, 16 ಮಾರ್ಚ್ 2017 (15:58 IST)
ಅಕ್ರಮ ಮಾಡುತ್ತಿರುವವರು ನೀವೆ, ನಿಮಗೆ ಮಾನ ಮರ್ಯಾದೆ ಇದೆಯಾ? ನಾಚಿಕೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
 
ಲೆಹರ್ ಸಿಂಗ್ ಡೈರಿಯ ಬಗ್ಗೆ ಏನು ಹೇಳುತ್ತೀರಿ? ಸಹಾರಾ ಡೈರಿ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಕೇವಲ ಗೋವಿಂದರಾಜು ಡೈರಿ ಪ್ರಸ್ತಾಪಿಸುವುದು ಯಾಕೆ ಎಂದು ಪ್ರಶ್ನಿಸಿದರು. ತಾಕತ್ತಿದ್ರೆ ಸದನದಲ್ಲಿ ಎಲ್ಲಾ ಡೈರಿಗಳ ಬಗ್ಗೆ ಚರ್ಚೆಯಾಗಲಿ ಎಂದು ಸವಾಲ್ ಹಾಕಿದರು.
 
ಮುಖ್ಯಮಂತ್ರಿ, ಸಚಿವರು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸುವ ನೀವು, ಮೊದಲು ನೀವು ಸರಕಾರದಲ್ಲಿದ್ದಾಗ ಬಹ್ಮಾಂಡ ಭ್ರಷ್ಟಾಚಾರ ಮಾಡಿರುವುದನ್ನು ನೆನಪಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
 
ರಾಜ್ಯವನ್ನು ಲೂಟಿ ಹೊಡೆದು ಜೈಲಿಗೆ ಹೋಗಿ ಬಂದವರು ನೀವು. ಅತ್ಯಾಚಾರ, ಅನಾಚಾರ ಸೇರಿದಂತೆ ಎಲ್ಲಾ ಅಕ್ರಮಗಳನ್ನು ಮಾಡಿದವರು ನೀವು. ನಿಮ್ಮಂತವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ಹಚ್ಚಿ ಅಜ್ಜ-ಅಜ್ಜಿಯ ಹತ್ಯೆಗೆ ಯತ್ನಿಸಿದ ಮೊಮ್ಮಗಳು