Select Your Language

Notifications

webdunia
webdunia
webdunia
webdunia

ದುಷ್ಟ ಕೂಟ ರಚಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್

ದುಷ್ಟ ಕೂಟ ರಚಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್
ಬೆಂಗಳೂರು , ಶುಕ್ರವಾರ, 17 ಫೆಬ್ರವರಿ 2017 (13:07 IST)
ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕೊಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ದುಷ್ಟ ಕೂಟ ರಚಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
 
 ಈ ಕೂಟದ ಮೂಲಕ ಎಲ್ಲರನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಕಪ್ಪ ಕೊಡುತ್ತಲೇ ಸಿಎಂ ಸೀಟು ಉಳಿಸಿಕೊಂಡಿದ್ದಾರೆ ಇಲ್ಲವಾದಲ್ಲಿ ಯಾವತ್ತೋ ಸಿಎಂ ಖುರ್ಚಿಯಿಂದ ಇಳಿಯಬೇಕಾಗುತ್ತಿತ್ತು ಎಂದು ಗುಡುಗಿದ್ದಾರೆ.
 
ಮಹಾದೇವಪ್ಪ ರಾಜಕೀಯದಲ್ಲಿರೋದೇ ಸಿದ್ದರಾಮಯ್ಯರಿಗಾಗಿ. ಮಹಾದೇವಪ್ಪಗೆ ಹಣ, ಓಟು ಅಧಿಕಾರ ಎಲ್ಲವು ನೀಡಿದ್ದೆ ಸಿದ್ದರಾಮಯ್ಯನವರು ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯ ಸಂಪುಟವಲ್ಲ. ಸಂಪೂರ್ಣ ಎಐಸಿಸಿ ನಾಯಕರು ನನ್ನ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಬರಲಿ. ನನ್ನ ತಾಕತ್ತು ಏನು ಎನ್ನುವುದನ್ನು ತೋರಿಸುತ್ತೇನೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಸವಾಲ್ ಹಾಕಿದ್ದಾರೆ
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ತಂಗಿ ಮೇಲಿನ ಆಸೆಗೆ ಪತ್ನಿಯನ್ನೇ ಕೊಂದ ಪತಿ