Select Your Language

Notifications

webdunia
webdunia
webdunia
webdunia

ಬೆತ್ತಲೆಯಾಗಿ ಓಡಾಡಿ ಎಂದು ನಾವೇನು ಹೇಳಿದ್ವಾ: ಸಿಎಂ ಉಡಾಫೆ

ಬೆತ್ತಲೆಯಾಗಿ ಓಡಾಡಿ ಎಂದು ನಾವೇನು ಹೇಳಿದ್ವಾ: ಸಿಎಂ ಉಡಾಫೆ
ಕೊಪ್ಪಳ , ಬುಧವಾರ, 21 ಡಿಸೆಂಬರ್ 2016 (16:04 IST)
ಗಿರಿಜನ ಹಾಗೂ ಆದಿವಾಸಿಗಳ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಿರಿಜನ ಹಾಗೂ ಆದಿವಾಸಿಳಿಗೆ ಬೆತ್ತಲೆಯಾಗಿ ಓಡಾಡಿ ಎಂದು ನಾವೇನು ಹೇಳಿದ್ವಾ ಎಂದು ಉಡಾಫೆ ಉತ್ತರ ನೀಡಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೀಯತೆ ದೃಷ್ಠಿಯಿಂದ ಗಿರಿಜನ ಹಾಗೂ ಆದಿವಾಸಿಗಳಿಗೆ ಪುನರ್‌ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆತ್ತಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. 
 
ಯಡಿಯೂರಪ್ಪ ವಿರುದ್ಧ ಸಿಎಂ ಗುಡುಗು
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುವುದನ್ನು ನಾವು ನೋಡಿದ್ದೇವೆ. ಸದ್ಯದಲ್ಲಿಯೇ ರಾಜ್ಯ ಸರಕಾರದ ಸಚಿವರು ಹಾಗೂ ಪರಿಷತ್ ಸದಸ್ಯರ ಬಣ್ಣ ಬಯಲಿಗೆಳೆಯುತ್ತೇನೆ. ರಾಜ್ಯ ಸರಕಾರ ಪತನವಾಗಲಿದೆ ಎಂದು ಹೇಳಿರುವ ಬಿಎಸ್‌ವೈಗೆ ದಿವ್ಯದೃಷ್ಠಿ ಇದೆಯೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಅಪಹರಿಸಿ, 5 ತಿಂಗಳು ಅತ್ಯಾಚಾರ