Select Your Language

Notifications

webdunia
webdunia
webdunia
webdunia

ಡಿಕೆಶಿಗೆ ಗೃಹಖಾತೆ ತಪ್ಪಿಸಿದ್ರಾ ಸಿಎಂ ಸಿದ್ದರಾಮಯ್ಯ?

ಡಿಕೆಶಿಗೆ ಗೃಹಖಾತೆ ತಪ್ಪಿಸಿದ್ರಾ ಸಿಎಂ ಸಿದ್ದರಾಮಯ್ಯ?
ಬೆಂಗಳೂರು , ಬುಧವಾರ, 30 ಆಗಸ್ಟ್ 2017 (08:51 IST)
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರೆಂದೇ ಖ್ಯಾತರಾಗಿರುವ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಮಹತ್ವದ ಗೃಹ ಇಲಾಖೆಯನ್ನು ಒಪ್ಪಿಸುವುದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ತಕರಾರು ತೆಗೆದರಾ?

 
ಹೀಗೊಂದು ಪ್ರಶ್ನೆ ಮೂಡಿದೆ. ಹೈಕಮಾಂಡ್ ಡಿಕೆಶಿಗೆ ಗೃಹ ಖಾತೆ ನೀಡಲು ಒಪ್ಪಿಗೆ ನೀಡಿತ್ತು. ಅಲ್ಲದೆ, ರಾಜ್ಯ ಕಾಂಗ್ರೆಸ್ ಗೂ ಸೂಚನೆ ನೀಡಿತ್ತು. ಆದರೆ ಸಿಎಂ ಮನಸ್ಸು ಮಾಡಿಲ್ಲ ಎನ್ನಲಾಗಿದೆ.

ಆದರೆ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಯಾಗಿದ್ದನ್ನೇ ಮುಂದಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸಿಯಾರು. ಇದು ಪಕ್ಷಕ್ಕೆ ನಷ್ಟವಾದೀತು ಎಂದು ಸಿಎಂ ಕಾರಣ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಡಿಕೆಶಿ ಬದಲಿಗೆ ಕರಾವಳಿ ಭಾಗದ ಹಿರಿಯ ಸಚಿವ ರಮಾನಾಥ ರೈಗೆ ಗೃಹ ಖಾತೆ ನೀಡಲು ಸಿಎಂ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಡೋಕ್ಲಾಂ ವಿವಾದಿಂದ ಭಾರತಕ್ಕೆ ತಕ್ಕ ಪಾಠ ಕಲಿತಿರಬಹುದು: ಚೀನಾ ಸೇನೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೋಕ್ಲಾಂ ವಿವಾದಿಂದ ಭಾರತ ತಕ್ಕ ಪಾಠ ಕಲಿತಿರಬಹುದು: ಚೀನಾ ಸೇನೆ