Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರಿಂದ ಕುತಂತ್ರ ಬುದ್ದಿ ಉಪಯೋಗ: ಕುಮಾರಸ್ವಾಮಿ ಕಿಡಿ

ಸಿದ್ದರಾಮಯ್ಯರಿಂದ ಕುತಂತ್ರ ಬುದ್ದಿ ಉಪಯೋಗ: ಕುಮಾರಸ್ವಾಮಿ ಕಿಡಿ
ಬೆಳಗಾವಿ: , ಗುರುವಾರ, 11 ಮೇ 2017 (14:15 IST)
ನಮ್ಮ ಮೇಲೆ ಸಿದ್ದರಾಮಯ್ಯ ಕುತಂತ್ರ ಬುದ್ದಿ ಉಪಯೋಗಿಸಿ ಪಕ್ಷ ಒಡೆಯಲು ಯತ್ನಿಸುತ್ತಿದ್ದಾರೆ. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ
 
ಮಾಜಿ ಸಂಸದ ಎಚ್.ವಿಶ್ವನಾಥ್, ಬಾಲಚಂದ್ರ ಜಾರಕಿಹೊಳಿ, ಮಾಲೀಕಯ್ಯ ಗುತ್ತೇದಾರ್,  ಉಮೇಶ್ ಕತ್ತಿ ಸೇರಿದಂತೆ ಇತರ ನಾಯಕರು ಜೆಡಿಎಸ್‌ಗೆ ಬಂದರೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದರು.
 
ರಾಜ್ಯದಲ್ಲಿ ಬರಗಾಲದ ಭೀಕರತೆ ಹೆಚ್ಚಾಗಿದ್ದರೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕೇವಲ ರಾಜಕೀಯ ಮಾಡುವುದರಲ್ಲಿ ಬಿಜಿಯಾಗಿದೆ ಎಂದು ಆರೋಪಿಸಿದರು.
 
ಜನತಾ ಪರಿವಾರ ಒಟ್ಟುಗೂಡುವ ಸೂಚನೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಜನತಾ ಪರಿಹಾರ ಒಂದಾಗಲಿದೆ.  ಬಿಜಿಪಿ. ಕಾಂಗ್ರೆಸ್‌ನಿಂದ ಬರುವವರ ಸಂಖ್ಯೆ ಎರಡಂಕಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ. 
 
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿಯಿದ್ದರೂ ಅಧಿಕಾರಿಗಳು ವಿಪಕ್ಷಗಳ ನಾಯಕರುಗಳಿಗೆ ಯಾವುದೇ ಮಾಹಿತಿ ನೀಡುತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಸಮಾದಾನ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಲಂಚಕ್ಕಾಗಿ ಪೀಡಿಸಿದವರನ್ನು ಎತ್ತಿ ಹೊರಗೆ ಬಿಸಾಕಿದ ಗ್ರಾಮಸ್ಥರು