Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್: ಸಾಗಿಬಂದ ಹಾದಿಯನ್ನು ಮರಳಿ ನೋಡಲು ಅವಕಾಶವಾಯಿತು-ಸಿಎಂ

ವೀಕೆಂಡ್ ವಿತ್ ರಮೇಶ್: ಸಾಗಿಬಂದ ಹಾದಿಯನ್ನು ಮರಳಿ ನೋಡಲು ಅವಕಾಶವಾಯಿತು-ಸಿಎಂ
ಬೆಂಗಳೂರು , ಶುಕ್ರವಾರ, 23 ಜೂನ್ 2017 (21:08 IST)
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾಧಕರ ಖುರ್ಚಿಯಲ್ಲಿ ಕುಳಿತು ತಮ್ಮ ನೆನಪಿನ ಬುತ್ತಿಯನ್ನು ತೆರೆದಿಟ್ಟಿದ್ದಾರೆ.
 
ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ಜೂ.22ರಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಬಾಲ್ಯದ ದಿನಗಳನ್ನು ಹಾಗೂ ತಾವು ಸಾಗಿಬಂದ ದಾರಿ ಕುರಿತು ಜನತೆಯಮುಂದೆ ತೆರೆದಿಟ್ಟಿದ್ದಾರೆ. ಜೂನ್ 24ರಂದು ಶನಿವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. 
 
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನನ್ನ ನೆನಪನ್ನು ಹಸಿರಾಗಿಸಿತು. ಸಾಗಿ ಬಂದ ಹಾದಿಯನ್ನು ಮರಳಿ ನೋಡುವ ಅವಕಾಶವಾಯಿತು. ಧನ್ಯವಾದ ಜೀ ಕನ್ನಡ ಹಾಗೂ @Ramesh_aravind ಎಂದು ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದ ಕಾಮಿ ಕ್ರಿಮಿ ಆರೆಸ್ಟ್