Select Your Language

Notifications

webdunia
webdunia
webdunia
webdunia

ರಾಕೇಶ್ ಸಿದ್ದರಾಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಚೆಲುವರಾಯಸ್ವಾಮಿ!

ರಾಕೇಶ್ ಸಿದ್ದರಾಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಚೆಲುವರಾಯಸ್ವಾಮಿ!
ಬೆಂಗಳೂರು , ಸೋಮವಾರ, 1 ಆಗಸ್ಟ್ 2016 (11:11 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಷ್ಠಪುತ್ರ ರಾಕೇಶ್ ನಿಧನದ ಸುದ್ದಿ ಅತ್ಯಂತ ನೋವು ತಂದಿದೆ ಎಂದು ಜೆಡಿಎಸ್‌ ಶಾಸಕ ಚೆಲುವರಾಯಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸುಪುತ್ರ ರಾಕೇಶ್ ಸಿದ್ದರಾಮಯ್ಯ ರಾಕೇಶ್ ನಿಧನದ ಸುದ್ದಿ ಅತ್ಯಂತ ನೋವು ತಂದಿದೆ. ಅಪ್ಪ ಅಧಿಕಾರದಲ್ಲಿದ್ದರೂ ಅವರು ಪ್ರಭಾವ ಬಳಸಿ ಕೆಲಸ ಮಾಡುತ್ತಿರಲಿಲ್ಲ. ಸಿಎಂ ಪುತ್ರನಾದರು ಅವರಲ್ಲಿ ಯಾವುದೇ ಅಹಂ ಇರಲಿಲ್ಲ. ಆತ ಒಳ್ಳೆಯ ಹುಡುಗ. ಎಲ್ಲರಿಗೂ ಸಹಾಯ ಮಾಡುವಂತಹ ವ್ಯಕ್ತಿತ್ವ ಹೊಂದಿದ್ದರು ಎಂದು ತಿಳಿಸಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಷ್ಠಪುತ್ರ ರಾಕೇಶ್ ಅವರು ಕ್ಷೇತ್ರದ ಜನತೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದರು. ಅವರು ರಾಜಕೀಯ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು ಎಂದು ಜೆಡಿಎಸ್‌ ಶಾಸಕ ಚೆಲುವರಾಯಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿ ಕೊಲೆಗಾರರ ಪತ್ತೆಗೆ ನೆರವಾದ ಬಾಲಕಿ