Webdunia - Bharat's app for daily news and videos

Install App

ಗಂಗಾನದಿ ಸ್ನಾನದಿಂದ ಪಾಪ, ಪುಣ್ಯ ಪರಿಹಾರ ಎಲ್ಲಾ ಗೊತ್ತಿಲ್ಲ, ನಾವು ಬಸವಣ್ಣನ ಅನುಯಾಯಿಗಳು ಎಂದ ಸಿದ್ದರಾಮಯ್ಯ

Krishnaveni K
ಬುಧವಾರ, 29 ಜನವರಿ 2025 (14:36 IST)
ಬೆಂಗಳೂರು: ಗಂಗಾ ನದಿಯಲ್ಲಿ ಮುಳುಗಿ ಏಳುವುದರಿಂದ ಪಾಪ, ಪುಣ್ಯ ಎಲ್ಲಾ ಪರಿಹಾರವಾಗುತ್ತದೆ ಎಂಬುದೆಲ್ಲಾ ನನಗೆ ಗೊತ್ತಿಲ್ಲ. ನಾವು ಬಸವಣ್ಣನವರ ಅನುಯಾಯಿಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೊನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೂ ಮೋದಿ, ಅಮಿತ್ ಶಾ ಪಾಪ ಕಳೆಯಲ್ಲ, ಕುಂಭಮೇಳದಿಂದ ಬಡತನ ನಿವಾರಣೆಯಾಗಲ್ಲ ಎಂದು ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ಬಿಜೆಪಿ ಮತ್ತು ಹಿಂದೂಗಳ ಆಕ್ರೋಶಕ್ಕೆ ಕಾರಣವಾಯಿತು. ಖರ್ಗೆ ಇದೇ ಮಾತನ್ನು ಅನ್ಯಧರ್ಮದ ಆಚರಣೆ ಬಗ್ಗೆ ಹೇಳುವ ತಾಕತ್ತ ತೋರಿಸಲಿ ಎಂದು ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಕಿಡಿ ಕಾರಿದ್ದರು. ಇದರ ಬಗ್ಗೆ ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಗಂಗಾನದಿಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದೆ ಎಂದು ನಂಬಿಕೆಯಿದೆ. ಆದರೆ ನಾವೆಲ್ಲಾ ಬಸವಣ್ಣನವರ ಅನುಯಾಯಿಗಳು. ಪಾಪ, ಪುಣ್ಯ ಎಲ್ಲ ಹೆಂಗೆ? ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ನಂಬಿದ್ದೇವೆ. ನನ್ನ ಅಭಿಪ್ರಾಯ ಕೂಡಾ ಅಷ್ಟೇ. ನಮ್ಮ ಸಂಪ್ರದಾಯ ಇದು ಅಷ್ಟೇ ಎಂದು ಖರ್ಗೆ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Viral video: ಕಾಲ್ತುಳಿತವಾದಾಗ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು, ವೈರಲ್ ವಿಡಿಯೋ ನೋಡಿ

Chinnaswamy stampede: ಸೆಕ್ಯುರಿಟಿ ಕೊಡಕ್ಕಾಗಲ್ಲ, ಡಿಸಿಪಿ ಪತ್ರ ವೈರಲ್: ನಾನವನಲ್ಲ ಅಂತಿದ್ದ ಸರ್ಕಾರಕ್ಕೆ ಮುಜುಗರ

Indore murder: ಹನಿಮೂನ್ ನಲ್ಲೇ ಗಂಡನಿಗೆ ಚಟ್ಟ ಕಟ್ಟಿದಳು: ಇಂಧೋರ್ ನಲ್ಲಿ ಪತ್ನಿಯ ಚಿಲ್ಲಿಂಗ್ ಮರ್ಡರ್ ಕತೆ

Siddaramaiah: ಕಮಿಷನರ್ ಭದ್ರತೆ ಕೊಡ್ಬೇಕಿತ್ತು, ನಂದೇನು ತಪ್ಪಿದೆ ಎಂದ ಸಿಎಂ: ಆರ್ಡರ್ ಕೊಟ್ಟಿದ್ದು ನೀವಲ್ವಾ ಎಂದ ಪಬ್ಲಿಕ್

ಮುಂದಿನ ಸುದ್ದಿ
Show comments