Publish Date: Tue, 20 Feb 2024 (19:03 IST)
Updated Date: Tue, 20 Feb 2024 (19:12 IST)
ಬೆಂಗಳೂರು ಮಂಗಳವಾರ ಸದನದಲ್ಲಿ ಹಲವು ತಮಾಷೆಯ ಸಂಗತಿಗಳು ನಡೆಯಿತು. ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ಬೊಮ್ಮಾಯಿ ಲವ್ಸ್ ಮಿ ಎಂದೂ ಚಟಾಕಿ ಹಾರಿಸಿದರು.
ಭಾರತೀಯ ಜನತಾ ಪಕ್ಷದವರು ಯಾವತ್ತೂ ಬಹುಮತ ಪಡೆದೇ ಇಲ್ಲ. ಎಂದಿಗೂ ಹಿಂಬಾಲಿಗಿನಿಂದ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಿಎಂ ಟೀಕಿಸಿದಾಗ, ಬಸವರಾಜ ಬೊಮ್ಮಾಯಿ ಎದ್ದು ನಿಂತರು. ಅದಕ್ಕೆ ಸಿಎಂ ಬೊಮ್ಮಾಯಿ ನಮಗೆ ಮೊದಲೇ ಆರೋಗ್ಯ ಸರಿಯಲ್ಲ ಕೂತುಕೊಳ್ಳಿ ಎಂದರು.
ಜೊತೆಗೆ, ಬಸವರಾಜ ಬೊಮ್ಮಾಯಿ ವೈಯಕ್ತಿಕವಾಗಿ ಸಿಕ್ಕಾಗ ನನ್ನನ್ನು ಹೊಗಳುತ್ತಾರೆ. ಬೊಮ್ಮಾಯಿ ಲವ್ಸ್ ಮಿ ಎಂದ ಸಿದ್ದರಾಮಯ್ಯ ಬಿಜೆಪಿಯನ್ನು ಇವತ್ತು ಜನರು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ. ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ವಿರೋಧಪಕ್ಷದಲ್ಲಿದ್ದಾಗ ಅದನ್ನು ಒಪ್ಪಿಕೊಂಡಿದ್ದೆವು. ನೀವೂ ಈಗ ವಿಶಾಲ ಮನಸಿನಿಂದ ಸೋಲೊಪ್ಪಿಕೊಳ್ಳಿ ಎಂದರು.