Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಬಳಿಯೇ ಹಣದ ಪ್ರಸ್ತಾಪವಿಟ್ಟ ಗ್ರಾಮಸ್ಥರು

ಸಿಎಂ ಸಿದ್ದರಾಮಯ್ಯ ಬಳಿಯೇ ಹಣದ ಪ್ರಸ್ತಾಪವಿಟ್ಟ ಗ್ರಾಮಸ್ಥರು
ಮೈಸೂರು , ಗುರುವಾರ, 6 ಏಪ್ರಿಲ್ 2017 (13:19 IST)
ಸಿಎಂ ಸಿದ್ದರಾಮಯ್ಯ ಬಳಿಯೇ ಗ್ರಾಮಸ್ಥರು ಹಣದ ಪ್ರಸ್ತಾಪವಿಟ್ಟಿರುವ ಘಟನೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ಸಿಎಂ ನಿವಾಸದಲ್ಲಿ ನಡೆದಿದೆ.

ಸಿಎಂ ಭೇಟಿಗೆ ಬಂದಿದ್ದ ಗ್ರಾಮಸ್ಥರು ನೀವು ಅವರಿಗೆ ಹಣ ಕೊಟ್ಟು ಕಳುಹಿಸಿದ್ದೀರಿ, ನಮಗೆ ಏನೂ ಸಿಕ್ಕಿಲ್ಲವೆಂದು ಕೆಳಿಕೊಂಡರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಿಎಂ, ನನ್ನ ಬಳಿ ಯಾರೂ ಬಂದಿಲ್ಲ. ನಾನು ಯಾರಿಗೂ ಹಣ ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ. ಇದೇವೇಳೆ, ಕಾಂಗ್ರೆಸ್ ಪಕ್ಷಕ್ಕೇ ಮತಹಾಕುವಂತೆ ಗ್ರಾಮಸ್ಥರಿಗೆ ಕರೆ ನೀಡಿದ್ದಾರೆ. 

ಇನ್ನೊಂದೆಡೆ, ಉತ್ತರಪ್ರದೇಶದಲಲ್ಲಿ ರೈತರ ಸಾಲಮನ್ನಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳು ನೀಡಿರುವ ಸಾಲವನ್ನ ಕೇಂದ್ರ ಸರ್ಕಾರ ಮನ್ನಾ ಮಾಡಲಿ, ನಾವು ಕೊಟ್ಟಿರುವ ಸಾಲವನ್ನ ನಾವು ಮನ್ನಾ ಮಾಡುತ್ತೇವೆಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಿನಲ್ಲಿ ಸೀರೆ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆ ಸೆರೆ