Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯರಲ್ಲಿ ರಾಕ್ಷಸ, ರಾವಣ, ಕೌರವ, ಕಂಸನ ಗುಣಗಳಿವೆ: ಕಲ್ಲಡ್ಕ ಪ್ರಭಾಕರ್

ಸಿಎಂ ಸಿದ್ದರಾಮಯ್ಯರಲ್ಲಿ ರಾಕ್ಷಸ, ರಾವಣ, ಕೌರವ, ಕಂಸನ ಗುಣಗಳಿವೆ: ಕಲ್ಲಡ್ಕ ಪ್ರಭಾಕರ್
ದಕ್ಷಿಣ ಕನ್ನಡ , ಬುಧವಾರ, 13 ಸೆಪ್ಟಂಬರ್ 2017 (13:16 IST)
ಸಿಎಂ ಸಿದ್ದರಾಮಯ್ಯರಲ್ಲಿ ರಾವಣ, ಕೌರವ, ಕಂಸನಿಗಿದ್ದ ರಾಕ್ಷಸಿಯ ಪ್ರವೃತ್ತಿಯಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ವಾಗ್ದಾಳಿ ನಡೆಸಿದ್ದಾರೆ.
ಸರಕಾರದಿಂದ ಶಾಲೆಗೆ ನೀಡುವ ಅನುದಾನ ಕಡಿತಗೊಳಿಸಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಕ್ಷಸಿಯ ಪ್ರವೃತ್ತಿಯಿರುವ ಮುಖ್ಯಮಂತ್ರಿಯ ಬಳಿ ಅನುದಾನ ಬಿಡುಗಡೆ ಮಾಡುವಂತೆ ಕೇಳುವುದಿಲ್ಲ ಎಂದು ಗುಡುಗಿದರು.
 
ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ರಮಾನಾಥ್ ರೈ ಇಬ್ಬರಲ್ಲೂ ರಾಕ್ಷಸಿ ಗುಣಗಳಿವೆ. ಮಕ್ಕಳ ಊಟಕ್ಕೆ ಕೊಕ್ಕೆ ಹಾಕಿರುವ ಅವರಿಗೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು. 
 
ಆರೆಸ್ಸೆಸ್ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಹತ್ಯೆಗಳಿಗೆ ಆರೆಸ್ಸೆಸ್ ಮುಖಂಡರನ್ನು ಹೊಣೆಯಾಗಿಸಲಾಗುತ್ತಿದೆ. ಆರೆಸ್ಸೆಸ್ ಸಂಘಟನೆ ದೇಶಭಕ್ತ ಸಂಘಟನೆ ಎನ್ನುವುದು ಗೊತ್ತಿರಲಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ತಿರುಗೇಟು ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್‌ಗಿನ್ನೂ ಚಿಕ್ಕ ವಯಸ್ಸು, ಇಂದಲ್ಲಾ ನಾಳೆ ಪ್ರಧಾನಿಯಾಗ್ತಾರೆ: ಸಿಎಂ