Select Your Language

Notifications

webdunia
webdunia
webdunia
webdunia

ವಿಕಲಚೇತನರಿಗೆ ಸಂಕ್ರಾತಿ ಗಿಫ್ಟ್ ನೀಡಿದ ಸಿಎಂ ಸಿದ್ದರಾಮಯ್ಯ!

ವಿಕಲಚೇತನರಿಗೆ ಸಂಕ್ರಾತಿ ಗಿಫ್ಟ್ ನೀಡಿದ ಸಿಎಂ ಸಿದ್ದರಾಮಯ್ಯ!
ಬೆಂಗಳೂರು , ಶನಿವಾರ, 14 ಜನವರಿ 2017 (16:32 IST)
ವಿಕಲಚೇತನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕ್ರಾಂತಿ ಕೊಡುಗೆ ನೀಡಿದ್ದು, ಈ ಬಾರಿ ಬಜೆಟ್‌ನಲ್ಲಿ ವಿಕಲಚೇತನರಿಗೆ ಪಿಂಚಣಿ, ಮಾಶಾಸನ ಹಾಗೂ ಗೌರವಧನ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಕಲಚೇತನರಿಗೆ ಬೇಕಾಗುವ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು, ಸಮಾಜದಲ್ಲಿ ಯಾರು ಪರಿಪೂರ್ಣರಲ್ಲ. ವಿಕಲಚೇತನರು ಆದ ತಕ್ಷಣ ಅವರಿಗೆ ಭವಿಷ್ಯ ಇಲ್ಲ ಅಂತಲ್ಲ. ಅವರು ಸ್ವಾಭಿಮಾನಿಯಾಗಿ ಸಮಾಜದ ಆಸ್ತಿಯಾಗುತ್ತಾರೆ. ಅದಕ್ಕಾಗಿಯೇ ಸರಕಾರ ಅವರಿಗೆ ಬೇಕಾದ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. 
 
ಇದು ವಿಕಲಚೇತರಿಗೆ ತೋರಿಸುವ ಅನುಕಂಪ ಅಲ್ಲ. ಅದು ಅವರ ಹಕ್ಕು. ಅವರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸರಕಾರದ ಕರ್ತವ್ಯ ಎಂದರು. 
 
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಉಮಾಶ್ರೀ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ಮಕ್ಕಳು ಸಜೀವ ದಹನ