Webdunia - Bharat's app for daily news and videos

Install App

ಸಿಎಂ ಭತ್ತ ನಾಟಿ: ಮಾಜಿ ಸಿಎಂ ಶೆಟ್ಟರ್ ಟಾಂಗ್

Webdunia
ಭಾನುವಾರ, 12 ಆಗಸ್ಟ್ 2018 (14:51 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭತ್ತ ನಾಟಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ ಟಾಂಗ್ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಸೀತಾಪೂರದಲ್ಲಿ ಸಿಎಂ ಕುಮಾರಸ್ವಾಮಿ  ನಾಟಿ ಕಾರ್ಯಕ್ರಮ ಬರೀ ಶೋ ಅಪ್  ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್, ಯಾವಾಗಲೋ ಒಮ್ಮೆ ನಾಟಿ ಮಾಡಿದರೆ ರೈತನಾಗೋದಿಲ್ಲ. ವಾರದಲ್ಲಿ ಮೂರು ದಿನವಾದರೂ ಕೃಷಿ ಚಟುವಟಿಕೆ ಮಾಡಬೇಕು. ಜಗದೀಶ ಶೆಟ್ಟ್ರು ಎಲ್ಲೋ ಕಡೆ ಹೊಲ ಉಳುಮೆ ಮಾಡಿದರೆ ರೈತನಾಗೋದಿಲ್ಲ, ಕೃಷಿ ಚಟುವಟಿಕೆ ದಿನನಿತ್ಯ ನಡೆದರೆ ಮಾತ್ರ ಆತ ರೈತ, ಮಣ್ಣಿನ ಮಗನಾಗಲು ಸಾಧ್ಯ, ಕೃಷಿ ಅನ್ನೋದು ನಮ್ಮ ದಿನ ನಿತ್ಯದ ಕಾರ್ಯವಾಗಬೇಕು ಎಂದಿದ್ದಾರೆ.

ಭತ್ತ ನಾಟಿ ಕಾರ್ಯಕ್ರಮ ದಿಂದ ರೈತರಿಗೆ ಯಾವುದೇ ಲಾಭವಿಲ್ಲ, ಗ್ರಾಮ ವಾಸ್ತವ್ಯದಿಂದ ಯಾವ ಹಳ್ಳಿಗಳು ಉದ್ದಾರವಾಗಿಲ್ಲ. ಕುಮಾರಸ್ವಾಮಿ ಅವರಿಗೆ ಕುಣಿಯಲು ಬಾರದಕ್ಕೆ ಅಂಗಳ ಡೊಂಕು ಎನ್ನುವಂತಾಗಿದೆ. ಮುಖ್ಯಮಂತ್ರಿ ಅವರಿಗೆ ರಾಜ್ಯಭಾರ ಮಾಡಲು ಆಗುತ್ತಿಲ್ಲ ಎಂದರು. ಗುತ್ತಿಗೆದಾರರ ಬಿಲ್ಲ ಹಾಗೂ ಸರಕಾರಿ ನೌಕರರ ಸಂಬಳ ಪಾವತ್ತಿಸುತ್ತಿಲ್ಲ ಎಂದು ದೂರಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments