Webdunia - Bharat's app for daily news and videos

Install App

ಏರ್ ಸ್ಟ್ರೈಕ್ ಬಗ್ಗೆ ಬಿಜೆಪಿಯವರ ಸಂಭ್ರಮ ಕಂಡು ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿ

Webdunia
ಗುರುವಾರ, 28 ಫೆಬ್ರವರಿ 2019 (08:23 IST)
ಹಾಸನ : ಭಾರತೀಯ ಸೇನೆಯ ಏರ್ ಸ್ಟ್ರೈಕ್ ಬಗ್ಗೆ ಬಿಜೆಪಿಯವರು ಸಂಭ್ರಮಿಸುವುದನ್ನು ಕಂಡು ಸಿಎಂ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.


ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಿಮಿತ್ತ ಹಾಸನ ಜಿಲ್ಲೆ ಅರಸೀಕೆರೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣ ಕುರಿತು ಪ್ರಸ್ತಾಪಿಸಿ, ಇದು ಇಂದಿಗೆ ಮುಗಿಯುವ ಲಕ್ಷಣ ಇಲ್ಲ. ಆದ್ರೆ ಬಿಜೆಪಿಯ ಹಲವು ನಾಯಕರು, ನಾವೇ ಯುದ್ಧ ಮಾಡಿ ಉಗ್ರರನ್ನು ಸದೆ ಬಡಿದಿದ್ದೇವೆ ಎಂಬಂತೆ ವಿಜಯಯಾತ್ರೆ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಟೀಕಿಸಿದ್ದಾರೆ.


ಆದರೆ ನಮ್ಮ ಯೋಧರ ಹತ್ಯೆ ನಂತರ ರಕ್ಷಣಾ ಇಲಾಖೆ ಕೈಗೊಂಡ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇದಕ್ಕೆ ಯಾವುದೇ ತಕರಾರು ಇಲ್ಲ ಎಂದರು. ಆದರೆ ಈ ರೀತಿಯ ಘಟನೆ ಏಕೆ ನಡೆಯುತ್ತಿದೆ? ಇದರಿಂದಾಗುವ ದುಷ್ಪರಿಣಾಮ ಸನ್ನಿವೇಶ ಎದುರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಸಜ್ಜಾಗಿರಬೇಕು ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments