Webdunia - Bharat's app for daily news and videos

Install App

ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

Webdunia
ಶುಕ್ರವಾರ, 12 ಏಪ್ರಿಲ್ 2019 (09:14 IST)
ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ವಿಡಿಯೋ ಒಂದನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ.


ಆದರೆ ಈ ವಿಡಿಯೋ ಸುಳ್ಳು, ಮತ್ತು ಬಿಜೆಪಿಯವರೇ ನನ್ನ ಇಮೇಜ್ ಹಾಳು ಮಾಡಲು ಎಡಿಟ್ ಮಾಡಿ ಹರಿಯಬಿಟ್ಟಿರುವ ವಿಡಿಯೋ ಎಂದು ಸಿಎಂ ಎಚ್ ಡಿಕೆ ಆರೋಪಿಸಿದ್ದಾರೆ.

ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಿಎಂ ಕುಮಾರಸ್ವಾಮಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುವ ವಿಡಿಯೋ ಪ್ರಕಟಿಸಿದ್ದು, ಇದರಲ್ಲಿ ಸಿಎಂ ‘ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ ಎಂದು ಯಾರು ಪರದಾಡುತ್ತಾರೋ ಅವರು ಹೋಗಿ ಬೇರೆ ದಾರಿಯಿಲ್ಲದೆ ಸೇನೆಗೆ ಸೇರುತ್ತಾರೆ. ಅಂತಹ ಯುವಕರ ಜೀವನದಲ್ಲಿ ಚೆಲ್ಲಾಟವಾಡುವ ಪ್ರಧಾನಿ ಇವರು’ ಎಂದು ಮೋದಿ ವಿರುದ್ಧ ಹರಿಹಾಯುತ್ತಾರೆ. ಈ ವಿಡಿಯೋ ಜತೆಗೆ ಬಿಜೆಪಿ ಮೊದಲು ನಿಮ್ಮ ಮಗನನ್ನು ಸೇನೆಗೆ ಸೇರಿಸಿ. ಆಗ ಸೇನೆಯವರ ಕಷ್ಟವೇನೆಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ

ಮುಂದಿನ ಸುದ್ದಿ
Show comments