Select Your Language

Notifications

webdunia
webdunia
webdunia
webdunia

ನಾನು ರಾಜಕಾರಣಿಯಲ್ಲ ಎಂದ ಸಿಎಂ ಕುಮಾರಸ್ವಾಮಿ

ನಾನು ರಾಜಕಾರಣಿಯಲ್ಲ ಎಂದ ಸಿಎಂ ಕುಮಾರಸ್ವಾಮಿ
ಮೈಸೂರು , ಬುಧವಾರ, 10 ಅಕ್ಟೋಬರ್ 2018 (09:30 IST)
ಮೈಸೂರು: ನಾನು ನಿಜವಾಗಿಯೂ ರಾಜಕಾರಣಿಯಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮತ್ತೊಮ್ಮೆ ನಾನು ಆಕಸ್ಮಿಕ ರಾಜಕಾರಣಿ ಎಂದಿದ್ದಾರೆ. ಹಿಂದೊಮ್ಮೆ ಹೀಗೆಯೇ ಸಿಎಂ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ‘ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ‍್ಳಬಾರದು. ಜನಪರ, ರೈತಪರ ಹಲವು ಯೋಜನೆಗಳನ್ನು ಜಾರಿಗೆ ತರಲಿದ್ದೇನೆ. ಯಾರೂ ಧೈರ್ಯಗೆಡಬೇಕಿಲ್ಲ. ನಾಡಿನ ಜನ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಮ್ಮ ಗುರಿ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಾಡಹಬ್ಬ ದಸರಾಗೆ ಸುಧಾಮೂರ್ತಿ ಚಾಲನೆ: ಯದುವಂಶದ ಕುಡಿಗೆ ಮೊದಲ ದಸರಾ