Select Your Language

Notifications

webdunia
webdunia
webdunia
webdunia

ಸಿಎಂ ಜಯಲಲಿತಾ ತಮಿಳುನಾಡು ಮಾರಮ್ಮಳಂತೆ: ಮಂಡ್ಯ ರೈತರ ಆಕ್ರೋಶ

ಸಿಎಂ ಜಯಲಲಿತಾ ತಮಿಳುನಾಡು ಮಾರಮ್ಮಳಂತೆ: ಮಂಡ್ಯ ರೈತರ ಆಕ್ರೋಶ
ಮಂಡ್ಯ , ಬುಧವಾರ, 7 ಸೆಪ್ಟಂಬರ್ 2016 (18:09 IST)
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮಾರಮ್ಮಳಂತೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಮುಖ್ಯಮಂತ್ರಿ ಜಯಲಲಿತಾ, ಮಂಡ್ಯ ರೈತರ ರಕ್ತ ಕುಡಿಯಬೇಡ, ಕೋಳಿಯ ರಕ್ತ ಕುಡಿ ಎಂದು ಎರಡು ಕೋಳಿಗಳನ್ನು ಕೊಯ್ದು ರಕ್ತಾರ್ಪಣೆ ಮಾಡಿ ಲೇವಡಿ ಮಾಡಿರುವಂತಹ ಫ್ಲೆಕ್ಸ್‌ಗಳು ನಗರದಲ್ಲಿ ರಾರಾಜಿಸುತ್ತಿವೆ.
 
ಜಯಲಲಿತಾ ಕಾಲು ಕೆಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಸಂಜಯ್ ವೃತ್ತದಲ್ಲಿ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  
 
ಮಂಡ್ಯ ಜಿಲ್ಲೆಯಾದ್ಯಂತ ಉದ್ರಿಕ್ತ ವಾತಾವರಣವಿದ್ದು, ರೈತನೊಬ್ಬ ತನ್ನ ಶಾಲನ್ನೇ ಕುತ್ತಿಗೆಗೆ ಉರುಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಸಭೆಯ ಬಳಿಕ ಮಂಚದೊಂದಿಗೆ ಮನೆಗೆ ತೆರಳಿದ ರೈತರು