Select Your Language

Notifications

webdunia
webdunia
webdunia
webdunia

ಸಿಎಂ ಎಂಟ್ರಿಯಿಂದ ರಂಗೇರಿದ ಉಪಚುನಾವಣಾ ಕಣ

ಸಿಎಂ ಎಂಟ್ರಿಯಿಂದ ರಂಗೇರಿದ ಉಪಚುನಾವಣಾ ಕಣ
, ಶುಕ್ರವಾರ, 31 ಮಾರ್ಚ್ 2017 (10:17 IST)
2 ಕ್ಷೇತ್ರಗಳ ಉಪಚುನಾವಣಾ ಕಣ ಇವತ್ತು ಮತ್ತಷ್ಟು ರಂಗೇರಲಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಚಿವರೊಡನೆ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. 3ಬದಿನ ನಂಜನಗೂಡು ಮತ್ತು 3 ದಿನ ಗುಂಡ್ಲುಪೇಟೆಯಲ್ಲಿ ಪ್ರಚಾರ ನಡೆಸಲಿದ್ದು, ಇಂದಿನಿಂದ 7 ದಿನ ಸಿಎಂ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದಾರೆ.

ಇವತ್ತು ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಸಿಎಂ ಪ್ರಚಾರ ನಡೆಸುತ್ತಿದ್ದಾರೆ. ಬದನವಾಳು, ದೇವನೂರು,ಚಿಕ್ಕ ಕವಲಂದೆ, ನೆರಳೆ ಸೇರಿದಂತೆ ಹತ್ತಾರು ಗ್ರಾಮಗಳಿಗೆ ತೆರಳಿ ಸಿಎಂ ಪ್ರಚಾರ ಮಾಡುತ್ತಿದ್ದಾರೆ. ಗುಂಡುಪೇಟೆಯಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್, .ಎಂ. ಬಿ. ಪಾಟೀಲ್ ಪ್ರಚಾರ ನಡೆಸುತ್ತಿದ್ದಾರೆ.

ಇತ್ತ, ಬಿಜೆಪಿಯೂ ಭರ್ಜರಿ ಪ್ರಚಾರ ನಡೆಸುತ್ತಿದೆ. ದೆಹಲಿಯ ಸಭೆಗೂ ತೆರಳದೇ ಉಪಚುನಾವಣಾ ಕಣದಲ್ಲಿ ಬೀಡು ಬಿಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಮಾಜಿ ಸಿಚಿವರು, ಶಾಸಕರ ಜೊತೆ ಪ್ರಚಾರ ಕೈಗೊಂಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಮೇಲೂ ಮೋದಿ-ಶಾ ಕಣ್ಣು.. ದೆಹಲಿಯಲ್ಲಿ ಸಂಸದರ ಸಭೆ