Select Your Language

Notifications

webdunia
webdunia
webdunia
webdunia

ಯಡಿಯೂರಪ್ಪರಿಗೆ ಡಿಸೆಂಬರ್‌ವರೆಗೆ ಸಿಎಂ ಕುರ್ಚಿ ಭದ್ರ?

ಯಡಿಯೂರಪ್ಪರಿಗೆ ಡಿಸೆಂಬರ್‌ವರೆಗೆ ಸಿಎಂ ಕುರ್ಚಿ ಭದ್ರ?
ಬೆಂಗಳೂರು , ಬುಧವಾರ, 29 ಜುಲೈ 2020 (22:20 IST)
ರಾಜ್ಯದ ರಾಜಕೀಯ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಡಿಸೆಂಬರ್‌ವರೆಗೆ ಸಿಎಂ ಸ್ಥಾನದಲ್ಲಿ ಸುರಕ್ಷಿತವಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಕೋವಿಡ್-19 ಆರ್ಭಟ ಕಡಿಮೆಯಾಗುವವರೆಗೂ ರಾಜಕೀಯ ಸಮಸ್ಯೆಗಳನ್ನು ನೋಡುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ.

77 ವರ್ಷದ ಮುಖ್ಯಮಂತ್ರಿಯನ್ನು ಬದಲಿಸಿದರೆ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸಬಹುದೆಂಬ ಆಶಯದೊಂದಿಗೆ ಪಕ್ಷದ ಕೆಲವು ಹಿರಿಯ ಮುಖಂಡರು ಕಾಯುತ್ತಿರುವುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರವಾಗಿದೆ.

20 ಶಾಸಕರನ್ನು ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ನೇಮಿಸಲು ಮುಖ್ಯಮಂತ್ರಿ ಮಾಡಿದ ಹಠಾತ್ ನಿರ್ಧಾರ, ಬಿಜೆಪಿ ರಾಜ್ಯ ಘಟಕದಲ್ಲಿ  ಅಸಮಧಾನಕ್ಕೆ ಕಾರಣವಾಗಿದೆ. 

ಈ ನಡುವೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಹಲವರು  ದೆಹಲಿ ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶೌಚಾಲಯದಲ್ಲಿ ಸತ್ತ ಕೊರೊನಾ ರೋಗಿ?