Select Your Language

Notifications

webdunia
webdunia
webdunia
webdunia

ಚಿತ್ರಸಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸಹಕಾರ ದೊಡ್ಡದ್ದು- ಬಿ ಎಲ್ ಶಂಕರ್

ಚಿತ್ರಸಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸಹಕಾರ ದೊಡ್ಡದ್ದು- ಬಿ ಎಲ್ ಶಂಕರ್
bangalore , ಭಾನುವಾರ, 8 ಜನವರಿ 2023 (15:23 IST)
ನಿರಂತರವಾಗಿ ಎಲ್ಲಾ ಸಿಎಂಗಳು,ಹಾಗೆಯೇ ಎಲ್ಲಾ ಸರ್ಕಾರ ಚಿತ್ರಸಂತೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ.ಚಿತ್ರಸಂತೆಗೆ ಬೆಂಬಲ ನೀಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸಿಎಂ ಬೊಮ್ಮಾಯಿ‌ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ.ನಾನು ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಪ್ರಮುಖ ರಾಜಕಾರಣಿ ಎಸ್.ಆರ್ ಬೊಮ್ಮಾಯಿ‌,ಅವರ ಆಶೀರ್ವಾದದಿಂದ ನಾನು ರಾಜಕೀಯಕ್ಕೆ ಬಂದೆ.ಸಿಎಂ ಬೊಮ್ಮಾಯಿ‌ ಈಗಾಗಲೇ ಬರುವಾಗ ಸಾಕಷ್ಟು ಸಲಹೆ ನೀಡಿದ್ದಾರೆ.ಪರಿಷತ್ ಶಾಖೆ ಉತ್ತರ ಕರ್ನಾಟಕದಲ್ಲಿ ತೆಗೆಯಬೇಕು ಅಂತ ಹೇಳಿದ್ದಾರೆ .ಚಿತ್ರಸಂತೆಗೆ ಬೇಕಾದ ಪ್ರತಿಯೊಂದು ಬೇಡಿಕೆಗೆ ಸಿಎಂ ಈಡೇರಿಸಿದ್ದಾರೆ  ಎಂದು ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.
 
ಸಿಎಂ ಜಿಎಸ್ ಟಿ ಸಭೆಯಲ್ಲಿ ಎಲ್ಲಾ ಭಾಗಿಯಾಗಲಿರುವ ಅನುಭವ ಇದೆ.ಹೀಗಾಗಿ ಲೆಕ್ಕಾಚಾರ ಇಟ್ಟುಕೊಂಡು ಚಿತ್ರಸಂತೆಗೆ ಸಿಎಂ ಬೊಮ್ಮಾಯಿ‌ ಹಣ ನೀಡಿದ್ರು.ಕಳೆದ ಬಾರಿಯ ಚಿತ್ರಸಂತೆಯಲ್ಲಿ ಉಳಿದಂತ ದುಡ್ಡು ಏನ್ ಮಾಡ್ಲಿ ಅಂತ ಸಿಎಂ ಕೇಳಿದ್ದೆ.ಹೀಗಾಗಿ ಈ ಬಾರಿಯ ಚಿತ್ರಸಂತೆಗೆ ಎಷ್ಟು ದುಡ್ಡು ಬೇಕೋ ಅಷ್ಟು ದುಡ್ಡು ಮಾತ್ರವೇ ಕೊಡ್ತೀನಿ ಅಂತ ಹೇಳಿದ್ರು .ಅಷ್ಟೇ ಹಣ ನೀಡಿದ್ರು.ಸಿಎಂ ಬಸವರಾಜ ಬೊಮ್ಮಾಯಿ‌ ತಂದೆಯವರ ಶತಮಾನೋತ್ಸವ ಇದೆ.ಅವರ ಬಸವರಾಜ ಬೊಮ್ಮಾಯಿ‌ ತಂದೆಯ ಪ್ರತಿಮೆ ಆಗಬೇಕು .ಎಸ್. ಆರ್ ಬೊಮ್ಮಾಯಿ‌ ಅವರು ನನ್ನ ಗುರುವಾಗಿ ಈ ಮಾತನ್ನು ಹೇಳುತ್ತೇನೆ.ಈ ಬಾರಿಯ ನಾನು ಯಾವುದೇ ಬೇಡಿಕೆ ಸಿಎಂ ಮುಂದೆ ಇಡಲ್ಲ.ಯಾಕೆಂದರೆ ಕಲೆ ಆರಾಧಿಸುವ ಗುಣ ಅವರಲ್ಲಿ ಇದೆ.ಹೀಗಾಗಿ ಅವರೇ ಚಿತ್ರಕಲಾ ಪರಿಷತ್ ಅಭಿವೃದ್ಧಿಗೆ ಸಹಾಯ ಮಾಡ್ತಾರೆ ಎಂಬ ನಂಬಿಕೆ ಇದೆ ಎಂದು ಬಿ ಎಲ್‌ ಶಂಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ-ಡಿಕೆಶಿ