Webdunia - Bharat's app for daily news and videos

Install App

ಸಿನೆಮಾ ಮನರಂಜನೆ ಮಾತ್ರವಲ್ಲ ...!!!! ಸಾಮಾಜಿಕ ಜವಾಬ್ದಾರಿಯೂ ಕೂಡ ಇದೆ ..!!

Webdunia
ಮಂಗಳವಾರ, 13 ಸೆಪ್ಟಂಬರ್ 2022 (14:02 IST)
ಚಲನಚಿತ್ರ ಎನ್ನುವುದು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಿನ್ನೆಲೆ ಸಂಗೀತ, ಸಿನಿಮಾಟೋಗ್ರಫಿ, ಸಂಕಲನ ಹೀಗೆ ಹತ್ತಾರು ತಂತ್ರಜ್ಞರು ಸಮೀಕರಣಗೊಂಡು ಸಿದ್ಧವಾಗುವ ಮಾಧ್ಯಮ. ಇವರಲ್ಲಿ ಯಾರಾದರೊಬ್ಬರು ತಮ್ಮ ಕಾರ್ಯದಲ್ಲಿ ಸೋತರೂ ಇಡೀ ಸಿನಿಮಾ ಸೋಲುತ್ತದೆ' ಎಂದು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಅಭಿಪ್ರಾಯಪಟ್ಟರು.
 
ನಿವೃತ್ತ ಶಿಕ್ಷಕ ಭಾಗ್ಯನಗರದ ಡಿ.ಎಂ.ಬಡಿಗೇರ ಅವರ 'ಅವ್ವ' ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ 37ನೇ ವಿಚಾರಮಂಥನ ಕೂಟದಲ್ಲಿ ಮಾತನಾಡಿದ ಅವರು 'ಭಿನ್ನ ಕಾರಣಗಳಿಗಾಗಿ ಸಿನಿಮಾ ನೋಡುವ ಪ್ರೇಕ್ಷಕ ವರ್ಗವಿದೆ‌. ಸಿನಿಮಾ ಮುಖ್ಯವಾಗಿ ಮನರಂಜನೆ ಮಾಧ್ಯಮ. ಜೊತೆಗೆ ಅದಕ್ಕೆ ತನ್ನದೇ ಆದ ಸಾಮಾಜಿಕ ಜವಾಬ್ದಾರಿಯೂ ಇದೆ' ಎಂದರು.
 
'ಮಿನುಗುತ್ತಿರುವ ಕನ್ನಡ ಚಿತ್ರರಂಗ; ಪ್ರೇಕ್ಷಕ ಬಾರದೇ ಕರಗುತ್ತಿರುವ ಚಿತ್ರಮಂದಿರ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಬಸವರಾಜ ಕರುಗಲ್ 'ಸದಭಿರುಚಿಯ ಕನ್ನಡ ಚಲನಚಿತ್ರಗಳಿಗೆ ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಸಿನಿಮಾ ಮಂದಿರಗಳಲ್ಲಿ ಸಮೂಹದೊಂದಿಗೆ ಚಲನಚಿತ್ರ ಆಸ್ವಾದಿಸುವ ಅನುಭವ, ವೈಯಕ್ತಿಕವಾಗಿ ಆನ್‌ಲೈನ್ ವೇದಿಕೆಗಳಲ್ಲಿ ದಕ್ಕುವುದಿಲ್ಲ' ಎಂದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments