ಸಿಎಂ ಸಿದ್ದರಾಮಯ್ಯಗೆ ಸ್ವಲ್ಪ ಡಿಗ್ನಿಟಿ ಇರಬೇಕಾಗಿತ್ತು. ಬೇರೆಯವರಿಗೆ ಅವಕಾಶ ಕೊಡಿ ಅಂದಿದ್ರೆ ನಾನೇ ಸ್ವತಃ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ. ನಮ್ಮನ್ನು ಸ್ವಲ್ಪ ಗೌರವಯುತವಾಗಿ ಕಳುಹಿಸಿಕೊಡಬೇಕಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ಏನ್ ಹಿಟ್ಲರ್ ಎಂದು ಮಾಜಿ ಸಚಿವ ಅಂಬರೀಶ್ ಗುಡುಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ಗಿಂತ ಪ್ರಾಮಾಣಿಕ, ಸಜ್ಜನ ವ್ಯಕ್ತಿ ಮತ್ತೊಬ್ಬರಿದ್ದಾರಾ? ಶ್ರೀನಿವಾಸ್ ಪ್ರಸಾದ್ ಸಹ ಮುಖ್ಯಮಂತ್ರಿ ಕ್ಯಾಂಡಿಡೇಟ್, ಅವರನ್ನೇ ಬಿಟ್ಟ ಮೇಲೆ ನಾವು ಯಾವ ಲೆಕ್ಕ ಅಲ್ವಾ. ಸಿಎಂ ಮನೆಗೆ ನಾನೇನು ಹೆಚ್ಚು ಬಾರಿ ಹೋಗಿಲ್ಲ. 3 ವರ್ಷದಲ್ಲಿ ಐದಾರು ಬಾರಿ ಹೋಗಿರಬಹುದು. ನಮ್ಮಿಂದ ಸಿಎಂಗೆ ಯಾವುದೇ ತೊಂದರೆಯಾಗಿಲ್ಲ ಎಂದರು.
ರಮ್ಯಾ ಕುತಂತದಿಂದ ಸಚಿವ ಸ್ಥಾನ ಹೊಯ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಂಬಿ, ಆ ಹುಡುಗಿ ಹೆಸರನ್ನು ಯಾಕೆ ತರ್ತೀರಿ ಪಾಪ. ಅವಳೇನು ಮುಖ್ಯಮಂತ್ರಿಯಾ , ಪ್ರಧಾನಮಂತ್ರಿಯಾ? ಪಾಪ ಅವಳು ಸೋಲು ಗೆಲುವು ಕಂಡವಳು. ಅವಳನ್ನು ಬಟ್ಟು ಬಿಡಿ, ಅವಳಿಗೂ ನನ್ನ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದರು.
ಮಂತ್ರಿಯಾಗಿ ಅಸಮರ್ಥ ಎಂದ ಮೇಲೆ ಶಾಸಕನಾಗಿಯೂ ಏಕೀರಬೇಕು.ಸ್ವಾಭಿಮಾನಕ್ಕೆ ಇದನ್ನು ನಾನು ಒಪ್ಪುವುದಿಲ್ಲ ಧಕ್ಕೆ ಬಂದರೆ ಯಾವುದಕ್ಕೂ ತಲೆಬಾಗುವುದಿಲ್ಲ. ಸಚಿವ ಸ್ಥಾನವೇ ಹೋದ ಮೇಲೆ ಸಿಎಂ ಭೇಟಿ ಮಾಡುವುದರಿಂದ ಏನು ಪ್ರಯೋಜನ?. ನಮ್ಮ ದಾರಿ ನಮಗೆ ಅವರ ದಾರಿ ಅವರಿಗೆ ಎಂದು ಮಾಜಿ ಸಚಿವ ಅಂಬರೀಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ