Webdunia - Bharat's app for daily news and videos

Install App

ರಾಜ್ಯಪಾಲರ ಹೆಸರು ಹೇಳಲು ತಡಬಡಾಯಿಸಿದ ಸಿಎಂ ಸಿದ್ದರಾಮಯ್ಯ

Webdunia
ಗುರುವಾರ, 20 ಅಕ್ಟೋಬರ್ 2016 (15:31 IST)
ಪೊಲೀಸ್ ಇಲಾಖೆಯ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯನವರು ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಆರಂಭಿಸುವ ಮೂಲಕ ಅಪಹಾಸ್ಯಕ್ಕಿಡಾದರು. 
 
ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಕೊನೆಗೆ ಹೆಸರನ್ನೆ ಹೇಳದೆ ಕೇವಲ ರಾಜ್ಯಪಾಲರೇ ಎಂದು ಭಾಷಣ ಮುಂದುವರೆಸಿ, ಕೂಡಲೇ ಇನ್ವೆಟೇಷನ್ ಕೊಡ್ರಿ ಎಂದು ಮಾತು ಮರೆಸಿದರು. 
 
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಅವಕಾಶ ನೀಡಬಾರದು. ಇದರಿಂದ ಇಲಾಖೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೇಳಿದರು. 
 
ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳಿಗೆ ಖಾಸಗಿ ಜೀವನವೇ ಇಲ್ಲ. ಆದರೂ ನಾವು ಈ ವೃತ್ತಿಗೆ ಬಂದಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಸದಾ ಒತ್ತಡವಿರುತ್ತದೆ. ಹೀಗಾಗಿ ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಕಿವಿಮಾತು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments